<p><strong>ತುಮಕೂರು:</strong> ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹8 ಲಕ್ಷ, 4 ಖಾಲಿ ಚೆಕ್ ಪಡೆದು ವಂಚಿಸಿದ ಆರೋಪದ ಮೇರೆಗೆ ರೈಲ್ವೆ ಇಲಾಖೆಯ ಟ್ರ್ಯಾಕ್ಮ್ಯಾನ್, ಸರಸ್ವತಿಪುರಂ ನಿವಾಸಿ ಎಚ್.ಆರ್.ವೆಂಕಟೇಶಯ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಬೆಸ್ಕಾಂನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಚೆಕ್, ಹಣ ಪಡೆದು ವಂಚಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಂಡು ಹಣ ವಾಪಸ್ ಕೊಡಿಸಬೇಕು’ ಎಂದು ಕೋರಿ ಬೆಂಗಳೂರಿನ ಸಿ.ವಿಜಯಕುಮಾರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.</p>.<p>‘ಬೆಸ್ಕಾಂನಲ್ಲಿ ಎಸ್ಬಿಡಿ ಆಪರೇಟರ್ ಕೆಲಸ ಕೊಡಿಸುತ್ತೇನೆ. ಇದಕ್ಕಾಗಿ ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿ, ₹13 ಲಕ್ಷ ನಗದು ನೀಡಬೇಕು’ ಎಂದು ವೆಂಕಟೇಶಯ್ಯ ಬೇಡಿಕೆ ಇಟ್ಟಿದ್ದರು. ‘ಉದ್ಯೋಗಕ್ಕೆ ಸೇರಿದ ನಂತರ ಹಣ ಸಂಗ್ರಹ ಮಾಡಬೇಕಾಗುತ್ತದೆ. ಭದ್ರತೆಗಾಗಿ ಮೊದಲೇ 4 ಖಾಲಿ ಚೆಕ್ಗಳನ್ನು ನೀಡಬೇಕು’ ಎಂದಿದ್ದರು. ಅದರಂತೆ ಚೆಕ್ಗಳನ್ನು ಸಹ ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>2023ರಲ್ಲಿ ಹಣ ನೀಡಿದ ನಂತರ ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಮುಖಾಂತರ ಒಂದು ತಿಂಗಳು ತರಬೇತಿ ಕೊಡಿಸಿದ್ದರು. ತರಬೇತಿ ಮುಗಿದ ನಂತರ ಬೆಸ್ಕಾಂ ವತಿಯಿಂದ ನೀಡುವಂತೆ ₹12,800 ಸಂಬಳ ನನ್ನ ಬ್ಯಾಂಕ್ ಖಾತೆ ಜಮಾ ಮಾಡಿದ್ದರು. ಸ್ವಲ್ಪ ದಿನ ಮನೆಯಲ್ಲಿ ಇರಿ, ಆದೇಶದ ಪ್ರತಿ ಸಿಕ್ಕ ನಂತರ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ನಂಬಿಸಿದ್ದರು. ನಂತರ ಮೋಸ ಹೋಗಿರುವುದು ಗೊತ್ತಾಯಿತು ಎಂದು ವಿಜಯಕುಮಾರಿ ಆರೋಪಿಸಿದ್ದಾರೆ.</p>.<p>ಹಣ ವಾಪಸ್ ಕೇಳಿದಾಗ ₹1 ಲಕ್ಷ ನೀಡಿದ್ದಾರೆ. ಬಾಕಿ ಹಣ, ಅಸಲಿ ದಾಖಲಾತಿ ಕೊಡುತ್ತಿಲ್ಲ. ಖಾಲಿ ಚೆಕ್, ದಾಖಲಾತಿ ದುರುಪಯೋಗವಾದರೆ ವೆಂಕಟೇಶಯ್ಯ ಅವರೇ ಕಾರಣ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹8 ಲಕ್ಷ, 4 ಖಾಲಿ ಚೆಕ್ ಪಡೆದು ವಂಚಿಸಿದ ಆರೋಪದ ಮೇರೆಗೆ ರೈಲ್ವೆ ಇಲಾಖೆಯ ಟ್ರ್ಯಾಕ್ಮ್ಯಾನ್, ಸರಸ್ವತಿಪುರಂ ನಿವಾಸಿ ಎಚ್.ಆರ್.ವೆಂಕಟೇಶಯ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಬೆಸ್ಕಾಂನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಚೆಕ್, ಹಣ ಪಡೆದು ವಂಚಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಂಡು ಹಣ ವಾಪಸ್ ಕೊಡಿಸಬೇಕು’ ಎಂದು ಕೋರಿ ಬೆಂಗಳೂರಿನ ಸಿ.ವಿಜಯಕುಮಾರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.</p>.<p>‘ಬೆಸ್ಕಾಂನಲ್ಲಿ ಎಸ್ಬಿಡಿ ಆಪರೇಟರ್ ಕೆಲಸ ಕೊಡಿಸುತ್ತೇನೆ. ಇದಕ್ಕಾಗಿ ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿ, ₹13 ಲಕ್ಷ ನಗದು ನೀಡಬೇಕು’ ಎಂದು ವೆಂಕಟೇಶಯ್ಯ ಬೇಡಿಕೆ ಇಟ್ಟಿದ್ದರು. ‘ಉದ್ಯೋಗಕ್ಕೆ ಸೇರಿದ ನಂತರ ಹಣ ಸಂಗ್ರಹ ಮಾಡಬೇಕಾಗುತ್ತದೆ. ಭದ್ರತೆಗಾಗಿ ಮೊದಲೇ 4 ಖಾಲಿ ಚೆಕ್ಗಳನ್ನು ನೀಡಬೇಕು’ ಎಂದಿದ್ದರು. ಅದರಂತೆ ಚೆಕ್ಗಳನ್ನು ಸಹ ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>2023ರಲ್ಲಿ ಹಣ ನೀಡಿದ ನಂತರ ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಮುಖಾಂತರ ಒಂದು ತಿಂಗಳು ತರಬೇತಿ ಕೊಡಿಸಿದ್ದರು. ತರಬೇತಿ ಮುಗಿದ ನಂತರ ಬೆಸ್ಕಾಂ ವತಿಯಿಂದ ನೀಡುವಂತೆ ₹12,800 ಸಂಬಳ ನನ್ನ ಬ್ಯಾಂಕ್ ಖಾತೆ ಜಮಾ ಮಾಡಿದ್ದರು. ಸ್ವಲ್ಪ ದಿನ ಮನೆಯಲ್ಲಿ ಇರಿ, ಆದೇಶದ ಪ್ರತಿ ಸಿಕ್ಕ ನಂತರ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ನಂಬಿಸಿದ್ದರು. ನಂತರ ಮೋಸ ಹೋಗಿರುವುದು ಗೊತ್ತಾಯಿತು ಎಂದು ವಿಜಯಕುಮಾರಿ ಆರೋಪಿಸಿದ್ದಾರೆ.</p>.<p>ಹಣ ವಾಪಸ್ ಕೇಳಿದಾಗ ₹1 ಲಕ್ಷ ನೀಡಿದ್ದಾರೆ. ಬಾಕಿ ಹಣ, ಅಸಲಿ ದಾಖಲಾತಿ ಕೊಡುತ್ತಿಲ್ಲ. ಖಾಲಿ ಚೆಕ್, ದಾಖಲಾತಿ ದುರುಪಯೋಗವಾದರೆ ವೆಂಕಟೇಶಯ್ಯ ಅವರೇ ಕಾರಣ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>