ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ತಲೆಮಾರುಗಳಿಂದ ಕುಟುಂಬಗಳು ವಾಸವಿರುವ ಗುಡಿಸಲು
ಸ್ನಾನ ಮಾಡಲು ಕಟ್ಟಲಾಗಿರುವ ಬಟ್ಟೆ
ಪುಟ್ಟ ಗುಡಿಸಲಲ್ಲಿ ಸಂಬಂಧಿಕರ ಆಸರೆ ಇಲ್ಲದೆ ಬದುಕುತ್ತಿರುವ ವೃದ್ಧೆ

ಮಂಜೂರಾದ ಜಮೀನಿನ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚೆ ಮಾಡಿ ಅಧಿಕೃತಗೊಳಿಸಿದ ನಂತರ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಈಗಾಗಲೇ ಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುವುದು
-ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ
ಕಿರುಬ ಚಿರತೆ ಕರಡಿ ಕಾಟ ಇರುವ ಕಡೆ ನಾವೀಗ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ನಮ್ಮನ್ನು ಪದೇ ಪದೇ ನಾನಾ ಕಾರಣಗಳಿಗೆ ಒಕ್ಕಲೆಬ್ಬಿಸಲಾಗುತ್ತಿದೆ. ಪಂಚಾಯಿತಿಯವರು ಪ್ರಭಾವಿಗಳ ಕೈಗೊಂಬೆಗಳಾಗಿ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ.
-ರಾಮು, ಸ್ಥಳೀಯ ನಿವಾಸಿ
ನಮ್ಮ ಕುಟುಂಬದಲ್ಲಿ ಪದವಿ ಓದುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೇಣದ ಬತ್ತಿ ಬೆಳಕಲ್ಲಿ ಅವರು ಓದುವಂತಾಗಿದೆ. ಕತ್ತಲಾದ ಬಳಿಕ ಸೀರೆ ಬಟ್ಟೆ ಕಟ್ಟಿಕೊಂಡು ನಾನು ಹಾಗೂ ನನ್ನ ಮಕ್ಕಳು ಸ್ನಾನ ಮಾಡಬೇಕಾದ ಅನಿವಾರ್ಯತೆ ಇದೆ.
-ಮಮತ, ಸ್ಥಳೀಯ ನಿವಾಸಿ
ಚಿಕ್ಕವಯಸ್ಸಿಂದ ಹೀಗೆ ಬದುಕುತ್ತಿದ್ದೇವೆ. ಯಾರೂ ನಮಗೆ ನಿಮಗೇನು ಬೇಕು ಎಂದು ಕೇಳೋರಿಲ್ಲ. ಅವರಿವರು ಕೊಟ್ಟ ಹಳೆ ಬಟ್ಟೆ ಹಾಕಿಕೊಂಡು ಮಕ್ಕಳ ಸಾಕಿದೆ. ನಾನು ಸಾಯೋ ಹೊತ್ತು ಬಂದರೂ ನಮ್ಗೆ ಏನೂ ಸೌಲಭ್ಯ ಇಲ್ಲ.
-ಅರಸಮ್ಮ, ವೃದ್ಧೆ