<p><strong>ತುಮಕೂರು:</strong> ‘ಭ್ರಷ್ಟಾಚಾರದಿಂದ ಲಪಟಾಯಿಸಿದ ಹಣವನ್ನು ಚುನಾವಣೆ ವೇಳೆ ಜನರಿಗೆ ಹಂಚಿ ಮತ ಖರೀದಿಸುವ ಭ್ರಷ್ಟರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ರಾಜ್ಯ ಕಾರ್ಯದರ್ಶಿ ಜ್ಞಾನ ಸಿಂಧು ಸ್ವಾಮಿ ಟೀಕಿಸಿದರು.</p>.<p>ನಗರದಲ್ಲಿ ಶನಿವಾರ ತುಮಕೂರು ಲೋಕಸಭಾ ಕ್ಷೇತ್ರದ ಕೆಆರ್ಎಸ್ ಅಭ್ಯರ್ಥಿ ಪ್ರದೀಪ್ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದರು.</p>.<p>ಕೆಆರ್ಎಸ್ ಯಾವುದೇ ಹಣ ಖರ್ಚು ಮಾಡದೆ ನೈಜ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಆಮಿಷ ಒಡ್ಡಿ ಸಾಮಾನ್ಯ ವ್ಯಕ್ತಿಗಳ ಹಕ್ಕು ಕಸಿಯಬಾರದು. ಮತದಾನದ ಹಕ್ಕು ಮತ್ತಷ್ಟು ಗಟ್ಟಿಗೊಳಿಸಬೇಕು. ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲು ಕೆಆರ್ಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.</p>.<p>ಕೆಆರ್ಎಸ್ ಅಭ್ಯರ್ಥಿ ಪ್ರದೀಪ್ಕುಮಾರ್, ‘ವಸಂತನರಸಾಪುರ ಕೈಗಾರಿಕೆಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಯಾವುದೇ ಕೆಲಸವನ್ನೂ ಕೊಟ್ಟಿಲ್ಲ. ರೈತರನ್ನು ಅತಂತ್ರರನ್ನಾಗಿ ಮಾಡಿದ್ದಾರೆ. ಈಗ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಮಾಡುತ್ತಿದ್ದಾರೆ’ ಎಂದರು.</p>.<p>ಕೆಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರಕುಮಾರ್ ಗೌಡ, ‘ಕೆಲಸ ಕೇಳಲು ಹೋದ ಬಡವರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪ್ರಶ್ನಿಸುವುದನ್ನು ಅಪರಾಧ ಎಂಬಂತೆ ಬಿಂಬಿಸುತ್ತಿದ್ದಾರೆ. ಬಡವರ ರಕ್ತ ಹೀರುತ್ತಿರುವ ವ್ಯವಸ್ಥೆ ಬದಲಾಯಿಸಲು ಈ ಬಾರಿ ಕೆಆರ್ಎಸ್ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.</p>.<p>ನಗರದ ಎಸ್.ಎಸ್.ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ರ್ಯಾಲಿ ನಡೆಯಿತು. ಕೆಆರ್ಎಸ್ ರಾಜ್ಯ ಕಾರ್ಯದರ್ಶಿ ಸೋಮಸುಂದರ್, ಪದಾಧಿಕಾರಿಗಳಾದ ಆರ್.ಮಹಾಂತೇಶ್, ಡಿ.ಸಿ.ಜಯಂತ್, ರವಿಕುಮಾರ್, ಚನ್ನಯ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ‘ಭ್ರಷ್ಟಾಚಾರದಿಂದ ಲಪಟಾಯಿಸಿದ ಹಣವನ್ನು ಚುನಾವಣೆ ವೇಳೆ ಜನರಿಗೆ ಹಂಚಿ ಮತ ಖರೀದಿಸುವ ಭ್ರಷ್ಟರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ರಾಜ್ಯ ಕಾರ್ಯದರ್ಶಿ ಜ್ಞಾನ ಸಿಂಧು ಸ್ವಾಮಿ ಟೀಕಿಸಿದರು.</p>.<p>ನಗರದಲ್ಲಿ ಶನಿವಾರ ತುಮಕೂರು ಲೋಕಸಭಾ ಕ್ಷೇತ್ರದ ಕೆಆರ್ಎಸ್ ಅಭ್ಯರ್ಥಿ ಪ್ರದೀಪ್ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದರು.</p>.<p>ಕೆಆರ್ಎಸ್ ಯಾವುದೇ ಹಣ ಖರ್ಚು ಮಾಡದೆ ನೈಜ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಆಮಿಷ ಒಡ್ಡಿ ಸಾಮಾನ್ಯ ವ್ಯಕ್ತಿಗಳ ಹಕ್ಕು ಕಸಿಯಬಾರದು. ಮತದಾನದ ಹಕ್ಕು ಮತ್ತಷ್ಟು ಗಟ್ಟಿಗೊಳಿಸಬೇಕು. ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲು ಕೆಆರ್ಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.</p>.<p>ಕೆಆರ್ಎಸ್ ಅಭ್ಯರ್ಥಿ ಪ್ರದೀಪ್ಕುಮಾರ್, ‘ವಸಂತನರಸಾಪುರ ಕೈಗಾರಿಕೆಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಯಾವುದೇ ಕೆಲಸವನ್ನೂ ಕೊಟ್ಟಿಲ್ಲ. ರೈತರನ್ನು ಅತಂತ್ರರನ್ನಾಗಿ ಮಾಡಿದ್ದಾರೆ. ಈಗ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಮಾಡುತ್ತಿದ್ದಾರೆ’ ಎಂದರು.</p>.<p>ಕೆಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರಕುಮಾರ್ ಗೌಡ, ‘ಕೆಲಸ ಕೇಳಲು ಹೋದ ಬಡವರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪ್ರಶ್ನಿಸುವುದನ್ನು ಅಪರಾಧ ಎಂಬಂತೆ ಬಿಂಬಿಸುತ್ತಿದ್ದಾರೆ. ಬಡವರ ರಕ್ತ ಹೀರುತ್ತಿರುವ ವ್ಯವಸ್ಥೆ ಬದಲಾಯಿಸಲು ಈ ಬಾರಿ ಕೆಆರ್ಎಸ್ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.</p>.<p>ನಗರದ ಎಸ್.ಎಸ್.ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ರ್ಯಾಲಿ ನಡೆಯಿತು. ಕೆಆರ್ಎಸ್ ರಾಜ್ಯ ಕಾರ್ಯದರ್ಶಿ ಸೋಮಸುಂದರ್, ಪದಾಧಿಕಾರಿಗಳಾದ ಆರ್.ಮಹಾಂತೇಶ್, ಡಿ.ಸಿ.ಜಯಂತ್, ರವಿಕುಮಾರ್, ಚನ್ನಯ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>