ತಿಪಟೂರು (ತುಮಕೂರು ಜಿ): ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಮತ್ತಿಘಟ್ಟ ಬಳಿಯ ಹೇಮಾವತಿ ನಾಲೆಯಲ್ಲಿ ಪ್ರೇಮಿಗಳಿಬ್ಬರ ಶವ ದೊರೆತಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮದ ಸುಂಗದ ಬಳಿ ಬೈಕ್ ನಿಲ್ಲಿಸಿ ನ.16ರಂದು ಹಿರಿಸಾವೆ ಗ್ರಾಮದ ಸುಶ್ಮಿತಾ(18) , ಮತ್ತಿಘಟ್ಟ ಗ್ರಾಮದ ರಮೇಶ್ (19)ನಾಲೆಗೆ ಜಿಗಿದಿದ್ದಾರೆ. ಪರಸ್ಪರ ಇಬ್ಬರು ಹಗ್ಗ ಕಟ್ಟಿಕೊಂಡು ಸಾವಿನಲ್ಲಿಯೂ ಒಂದಾಗಿದ್ದಾರೆ.
ಸುಶ್ಮಿತಾ ಪದವಿ ಓದುತ್ತಿದ್ದು, ರಮೇಶ್ ಐಟಿಐ ಓದುತ್ತಿದ್ದರು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿಯ ಕಾರಣದಿಂದ ವಿವಾಹಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗುತ್ತದೆ ಎಂದು ಹೆದರಿದ್ದರು.
ಈ ಇಬ್ಬರು ಕಾಣೆಯಾಗಿರುವ ಬಗ್ಗೆ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.