<p><strong>ಮಧುಗಿರಿ:</strong> ಊರಿನ ಒಳಿತಿಗಾಗಿ ಪೂರ್ವಿಕರು ಆಚರಿಸಿಕೊಂಡು ಬಂದಿದ್ದ, ಹೊರಬೀಡು ವಿಶಿಷ್ಟ ಆಚರಣೆಯನ್ನು ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯದ ಗ್ರಾಮಸ್ಥರು ಮಂಗಳವಾರ ಆಚರಿಸಿದರು.</p>.<p>ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯ ಗ್ರಾಮದಲ್ಲಿ 130ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲ ವರ್ಗದ ಜನರು ಮೂರು ವರ್ಷಕೊಮ್ಮೆ ನಡೆಯುವ ಹೊರಬೀಡು ಸಂಪ್ರದಾಯವನ್ನು ಚಾಚು ತಪ್ಪದೆ ಪಾಲಿಸುತ್ತಾ ಬಂದಿದ್ದಾರೆ.</p>.<p>ಹೊರಬೀಡು ಆಚರಣೆಗಾಗಿ ಮಂಗಳವಾರ ಮುಂಜಾನೆ ಐದು ಗಂಟೆಗೆ ದನ-ಕರು, ಕುರಿಗಳೊಂದಿಗೆ ಇಡೀ ಕುಟುಂಬದವರು ಮನೆಗಳಿಗೆ ಬೀಗ ಹಾಕಿ ಗ್ರಾಮಕ್ಕೆ ಹೋಗುವ ಬರುವ ದಾರಿಗಳನ್ನು ಮುಚ್ಚುತ್ತಾರೆ. ಹೀಗೆ ಮುಚ್ಚಿರುವ ದಾರಿಗಳಲ್ಲಿ ಯಾರು ಗ್ರಾಮವನ್ನು ಪ್ರವೇಶಿಸದಂತೆ ಕಾವಲುಗಾರರನ್ನು ನೇಮಿಸಿದ್ದರು.</p>.<p>ಮರಗಳ ಆಶ್ರಯದ ಮೊರೆ ಹೊಕ್ಕ ಗ್ರಾಮಸ್ಥರು ಸೂರ್ಯಾಸ್ತದ ತನಕ ಗ್ರಾಮದತ್ತ ಬರಲಿಲ್ಲ. ಈ ಆಚರಣೆಗೆ ನೆಂಟರು-ಮಿತ್ರರು ಭಾಗವಹಿಸಿದ್ದರು. ಗ್ರಾಮದ ಹೊರಭಾಗದ ಜಮೀನುಗಳಲ್ಲಿರುವ ಗ್ರಾಮಸ್ಥರು ತಮಗೆ ಇಷ್ಟವಾಗುವಂತಹ ಸಸ್ಯಹಾರ, ಮಾಂಸಹಾರ, ವಿವಿಧ ಭಕ್ಷ್ಯ ಭೋಜನಗಳನ್ನು ಕುಟುಂಬದ ಜೊತೆಗೂಡಿ ಹೊರಬೀಡಿನ ಸವಿಯನ್ನು ಸವಿದರು.</p>.<p>ಸಂಜೆಯಾದ ಮೇಲೆ ಗ್ರಾಮದ ಪ್ರಮುಖ ರಸ್ತೆಗೆ ಹಾಕಿದ್ದ ಮುಳ್ಳಿನ ಬೇಲಿಯನ್ನು ಹೊರತೆಗೆದು ವಿವಿಧ ಪೂಜಾ ಕಾರ್ಯಗಳನ್ನು ಮಾಡಿ ಪ್ರಮುಖ ರಸ್ತೆಗಳಿಗೆ ಶಾಂತಿ ನೆರವೇರಿಸಿ, ಗ್ರಾಮದ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಮನೆಗಳಿಗೆ ತೆರಳಿದರು.</p>.<p>ಹಲವು ವರ್ಷಗಳಿಂದ ಪ್ರತಿ ಮೂರು ವರ್ಷಕೊಮ್ಮೆ ಗ್ರಾಮದಲ್ಲಿ ಹೊರಬೀಡು ಆಚರಣೆ ಗ್ರಾಮಸ್ಥೆರಲ್ಲಾ ಸೇರಿಕೊಂಡು ಮಾಡುತ್ತಿದ್ದೇವೆ ಎಂದು ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ:</strong> ಊರಿನ ಒಳಿತಿಗಾಗಿ ಪೂರ್ವಿಕರು ಆಚರಿಸಿಕೊಂಡು ಬಂದಿದ್ದ, ಹೊರಬೀಡು ವಿಶಿಷ್ಟ ಆಚರಣೆಯನ್ನು ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯದ ಗ್ರಾಮಸ್ಥರು ಮಂಗಳವಾರ ಆಚರಿಸಿದರು.</p>.<p>ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯ ಗ್ರಾಮದಲ್ಲಿ 130ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲ ವರ್ಗದ ಜನರು ಮೂರು ವರ್ಷಕೊಮ್ಮೆ ನಡೆಯುವ ಹೊರಬೀಡು ಸಂಪ್ರದಾಯವನ್ನು ಚಾಚು ತಪ್ಪದೆ ಪಾಲಿಸುತ್ತಾ ಬಂದಿದ್ದಾರೆ.</p>.<p>ಹೊರಬೀಡು ಆಚರಣೆಗಾಗಿ ಮಂಗಳವಾರ ಮುಂಜಾನೆ ಐದು ಗಂಟೆಗೆ ದನ-ಕರು, ಕುರಿಗಳೊಂದಿಗೆ ಇಡೀ ಕುಟುಂಬದವರು ಮನೆಗಳಿಗೆ ಬೀಗ ಹಾಕಿ ಗ್ರಾಮಕ್ಕೆ ಹೋಗುವ ಬರುವ ದಾರಿಗಳನ್ನು ಮುಚ್ಚುತ್ತಾರೆ. ಹೀಗೆ ಮುಚ್ಚಿರುವ ದಾರಿಗಳಲ್ಲಿ ಯಾರು ಗ್ರಾಮವನ್ನು ಪ್ರವೇಶಿಸದಂತೆ ಕಾವಲುಗಾರರನ್ನು ನೇಮಿಸಿದ್ದರು.</p>.<p>ಮರಗಳ ಆಶ್ರಯದ ಮೊರೆ ಹೊಕ್ಕ ಗ್ರಾಮಸ್ಥರು ಸೂರ್ಯಾಸ್ತದ ತನಕ ಗ್ರಾಮದತ್ತ ಬರಲಿಲ್ಲ. ಈ ಆಚರಣೆಗೆ ನೆಂಟರು-ಮಿತ್ರರು ಭಾಗವಹಿಸಿದ್ದರು. ಗ್ರಾಮದ ಹೊರಭಾಗದ ಜಮೀನುಗಳಲ್ಲಿರುವ ಗ್ರಾಮಸ್ಥರು ತಮಗೆ ಇಷ್ಟವಾಗುವಂತಹ ಸಸ್ಯಹಾರ, ಮಾಂಸಹಾರ, ವಿವಿಧ ಭಕ್ಷ್ಯ ಭೋಜನಗಳನ್ನು ಕುಟುಂಬದ ಜೊತೆಗೂಡಿ ಹೊರಬೀಡಿನ ಸವಿಯನ್ನು ಸವಿದರು.</p>.<p>ಸಂಜೆಯಾದ ಮೇಲೆ ಗ್ರಾಮದ ಪ್ರಮುಖ ರಸ್ತೆಗೆ ಹಾಕಿದ್ದ ಮುಳ್ಳಿನ ಬೇಲಿಯನ್ನು ಹೊರತೆಗೆದು ವಿವಿಧ ಪೂಜಾ ಕಾರ್ಯಗಳನ್ನು ಮಾಡಿ ಪ್ರಮುಖ ರಸ್ತೆಗಳಿಗೆ ಶಾಂತಿ ನೆರವೇರಿಸಿ, ಗ್ರಾಮದ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಮನೆಗಳಿಗೆ ತೆರಳಿದರು.</p>.<p>ಹಲವು ವರ್ಷಗಳಿಂದ ಪ್ರತಿ ಮೂರು ವರ್ಷಕೊಮ್ಮೆ ಗ್ರಾಮದಲ್ಲಿ ಹೊರಬೀಡು ಆಚರಣೆ ಗ್ರಾಮಸ್ಥೆರಲ್ಲಾ ಸೇರಿಕೊಂಡು ಮಾಡುತ್ತಿದ್ದೇವೆ ಎಂದು ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>