ನಾಡಕಚೇರಿ ಕಾರ್ಯಾಲಯ ಕೇವಲ 25X30 ಸುತ್ತಳತೆ ಜಾಗದಲ್ಲಿದ್ದು, ಅಲ್ಲಿ ಉಪ ತಹಶೀಲ್ದಾರ್, ಕಂದಾಯ ತನಿಖಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂಪ್ಯೂಟರ್ ಆಪರೇಟರ್ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಹಾಗಾಗಿ ಪುರವರ ಗ್ರಾಮದ ಬ್ಯಾಲ್ಯ ರಸ್ತೆಯಲ್ಲಿರುವ ಕಂದಾಯ ತನಿಖಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಎಎನ್ಎಂ ಆರೋಗ್ಯ ಇಲಾಖೆಗೆಂದು ನಿರ್ಮಿಸಿರುವ ಮೂರು ಕಟ್ಟಡ ಪಾಳು ಬಿದ್ದು ಹಲವು ವರ್ಷ ಕಳೆದಿವೆ. ಸರ್ಕಾರ ಅವುಗಳನ್ನು ಕೆಡವಿ ಅಲ್ಲಿ ಅಗತ್ಯವಿರುವ ಇಲಾಖೆಗಳಿಗೆ ನೂತನ ಕಟ್ಟಡ ನಿರ್ಮಿಸಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಬೇಕು ಎನ್ನುತ್ತಾರೆ ಪುರವರದ ಎ.ಎಂ. ಲಿಂಗರೆಡ್ಡಿ.