ಇದರ ಜೊತೆಗೆ ಗಂಡು ಮಕ್ಕಳು ಮತ್ತು ಚಿಕ್ಕಮಕ್ಕಳಿರುವ ಮನೆಗಳಲ್ಲಿ ಮಕ್ಕಳಿಗೆ ಮುಖ ತೊಳಸಿ ಮನೆಯ ಮುಖ್ಯ ದ್ವಾರದ ಹೊಸಲನ್ನು ತೊಳೆದು ಅದಕ್ಕೆ ಅರಶಿನ-ಕುಂಕುಮ ಹಚ್ಚಿ, ಕೆಂಪು ನೀರು ಮಾಡಿ ಅದರ ಮೇಲೆ ತಮ್ಮ ಮಕ್ಕಳನ್ನು ಕುಳ್ಳರಿಸಿ ಪೂಜೆ ನಂತರ ಮೂರು ರಸ್ತೆ ಸೇರುವ ಜಾಗದಲ್ಲಿ ಬಿಟ್ಟರೆ ದೋಷ ಪರಿಹಾರ ಆಗುತ್ತದೆ. ಇಲ್ಲವಾದರೆ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಹಲವು ಗ್ರಾಮಗಳಲ್ಲಿನ ತಾಯಂದಿರು ಸೂರ್ಯ ಹುಟ್ಟುವ ಮುಂಚೆಯೇ ಪೂಜೆ ಸಲ್ಲಿಸಿ ದಾರಿಯಲ್ಲಿ ಕೆಂಪು ನೀರು ಹಾಕುತ್ತಿರುವುದು ಕಂಡು ಬಂದಿತು. ದೇಶದಲ್ಲಿ ಈಗಾಗಲೇ ಕೊರೊನಾ ವೈರಸ್ ಎಂಬ ಮಹಾಮಾರಿ ಜನರನ್ನು ಆತಂಕಕ್ಕೆ ಈಡು ಮಾಡಿ ನಿದ್ದೆಗೆಡಿಸಿದ್ದರೆ, ಶುಕ್ರವಾರ ಮುಂಜಾನೆ ಇಂತಹ ಸುದ್ದಿ ಜನರನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ.