<p><strong>ತುಮಕೂರು: </strong>ಕೊರೊನಾ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೆ, ತುಮಕೂರು ವಿಶ್ವವಿದ್ಯಾಲಯ ಆನ್ಲೈನ್ನಲ್ಲಿ ಪಿಎಚ್.ಡಿ ವಿದ್ವತ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಗಮನ ಸೆಳೆದಿದೆ.</p>.<p>ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶಿವಕೀರ್ತಿ ಅವರು ‘ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪ್ರತಿಮಾ ದೃಷ್ಟಿ’ ಮತ್ತು ಮಂಜುನಾಥ ಕರಬ ಅವರು ‘ಕರ್ನಾಟಕ ಕರಾವಳಿಯ ಪರಶುರಾಮ ಪರಂಪರೆ: ಆಧುನಿಕ ಸಂಕಥನಗಳು’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದರು.</p>.<p>ಇಬ್ಬರಿಗೂ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾರ್ಗದರ್ಶಕರಾಗಿದ್ದಾರೆ. ಸಂಶೋಧನೆಯ ಅಂತಿಮ ಹಂತದಲ್ಲಿ ವಿದ್ವತ್ ಪರೀಕ್ಷೆ ನಡೆಸಲು ವಿ.ವಿ ಅನುಮತಿ ನೀಡಿತ್ತು. ಆದರೆ ಪರೀಕ್ಷೆಗೂ ಮೊದಲೇ ಲಾಕ್ಡೌನ್ ಎದುರಾಯಿತು.</p>.<p>ಈ ಸಮಯದಲ್ಲಿ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ಸೂಚಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಅಗತ್ಯ ಆಡಳಿತಾತ್ಮಕ ಅನುಕೂಲಗಳನ್ನು ಕಲ್ಪಿಸಿದರು. ವಾಟ್ಸ್ಆ್ಯಪ್ ಮೂಲಕ ವಿದ್ವತ್ ಪರೀಕ್ಷಾ ಬಳಗ ರಚಿಸಿದ ಕನ್ನಡ ವಿಭಾಗವು ಯೂಟ್ಯೂಬ್ನಲ್ಲಿ ತಮ್ಮ ಸಂಶೋಧನೆ ಪ್ರಸ್ತುತ ಪಡಿಸುವಂತೆ ಸಂಶೋಧನಾರ್ಥಿಗಳಿಗೆ ಸೂಚಿಸಿತು.</p>.<p>ಇಬ್ಬರೂ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ವೈಧಾನಿಕತೆ ಮತ್ತು ತಾತ್ವಿಕತೆಗಳನ್ನು ವಿವರಿಸಿದರು. ಡಾಕ್ಟರಲ್ ಸಮಿತಿಯು ಸಂಶೋಧನಾರ್ಥಿಗಳ ಪರೀಕ್ಷೆ ನಡೆಸಿತು. ಈ ಎಲ್ಲ ವಿಧಿ– ವಿಧಾನಗಳನ್ನು ದಾಖಲಿಸಿ, ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿದ ವಿಭಾಗವು ವಿ.ವಿಯಲ್ಲಿ ಇತಿಹಾಸ ಬರೆಯಿತು.</p>.<p>‘ಇಂತಹ ತುರ್ತು ಸಂದರ್ಭದಲ್ಲಿ ಆನ್ಲೈನ್ ಮೂಲಕ ಪಿಎಚ್.ಡಿ ಪರೀಕ್ಷೆ ನಡೆಸಬಹುದು ಎಂದು ಯುಜಿಸಿ ಈಗಷ್ಟೇ ಚಿಂತಿಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಇನ್ನೂ ಪ್ರಸ್ತಾವ ಹಂತದಲ್ಲಿರುವ ಈ ಪರೀಕ್ಷಾ ಪದ್ಧತಿಯನ್ನು ಕುಲಪತಿಯ ದೂರದೃಷ್ಟಿಯಿಂದಾಗಿ ಪ್ರಾದೇಶಿಕ ಮಟ್ಟದಲ್ಲಿ ಜಾರಿಗೊಳಿಸಲು ಸಾಧ್ಯವಾಯಿತು’ ಎಂದು ಪ್ರೊ.ನಿತ್ಯಾನಂದ ಬಿ.ಶೆಟ್ಟಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಕೊರೊನಾ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೆ, ತುಮಕೂರು ವಿಶ್ವವಿದ್ಯಾಲಯ ಆನ್ಲೈನ್ನಲ್ಲಿ ಪಿಎಚ್.ಡಿ ವಿದ್ವತ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಗಮನ ಸೆಳೆದಿದೆ.</p>.<p>ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶಿವಕೀರ್ತಿ ಅವರು ‘ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪ್ರತಿಮಾ ದೃಷ್ಟಿ’ ಮತ್ತು ಮಂಜುನಾಥ ಕರಬ ಅವರು ‘ಕರ್ನಾಟಕ ಕರಾವಳಿಯ ಪರಶುರಾಮ ಪರಂಪರೆ: ಆಧುನಿಕ ಸಂಕಥನಗಳು’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದರು.</p>.<p>ಇಬ್ಬರಿಗೂ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾರ್ಗದರ್ಶಕರಾಗಿದ್ದಾರೆ. ಸಂಶೋಧನೆಯ ಅಂತಿಮ ಹಂತದಲ್ಲಿ ವಿದ್ವತ್ ಪರೀಕ್ಷೆ ನಡೆಸಲು ವಿ.ವಿ ಅನುಮತಿ ನೀಡಿತ್ತು. ಆದರೆ ಪರೀಕ್ಷೆಗೂ ಮೊದಲೇ ಲಾಕ್ಡೌನ್ ಎದುರಾಯಿತು.</p>.<p>ಈ ಸಮಯದಲ್ಲಿ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ಸೂಚಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಅಗತ್ಯ ಆಡಳಿತಾತ್ಮಕ ಅನುಕೂಲಗಳನ್ನು ಕಲ್ಪಿಸಿದರು. ವಾಟ್ಸ್ಆ್ಯಪ್ ಮೂಲಕ ವಿದ್ವತ್ ಪರೀಕ್ಷಾ ಬಳಗ ರಚಿಸಿದ ಕನ್ನಡ ವಿಭಾಗವು ಯೂಟ್ಯೂಬ್ನಲ್ಲಿ ತಮ್ಮ ಸಂಶೋಧನೆ ಪ್ರಸ್ತುತ ಪಡಿಸುವಂತೆ ಸಂಶೋಧನಾರ್ಥಿಗಳಿಗೆ ಸೂಚಿಸಿತು.</p>.<p>ಇಬ್ಬರೂ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ವೈಧಾನಿಕತೆ ಮತ್ತು ತಾತ್ವಿಕತೆಗಳನ್ನು ವಿವರಿಸಿದರು. ಡಾಕ್ಟರಲ್ ಸಮಿತಿಯು ಸಂಶೋಧನಾರ್ಥಿಗಳ ಪರೀಕ್ಷೆ ನಡೆಸಿತು. ಈ ಎಲ್ಲ ವಿಧಿ– ವಿಧಾನಗಳನ್ನು ದಾಖಲಿಸಿ, ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿದ ವಿಭಾಗವು ವಿ.ವಿಯಲ್ಲಿ ಇತಿಹಾಸ ಬರೆಯಿತು.</p>.<p>‘ಇಂತಹ ತುರ್ತು ಸಂದರ್ಭದಲ್ಲಿ ಆನ್ಲೈನ್ ಮೂಲಕ ಪಿಎಚ್.ಡಿ ಪರೀಕ್ಷೆ ನಡೆಸಬಹುದು ಎಂದು ಯುಜಿಸಿ ಈಗಷ್ಟೇ ಚಿಂತಿಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಇನ್ನೂ ಪ್ರಸ್ತಾವ ಹಂತದಲ್ಲಿರುವ ಈ ಪರೀಕ್ಷಾ ಪದ್ಧತಿಯನ್ನು ಕುಲಪತಿಯ ದೂರದೃಷ್ಟಿಯಿಂದಾಗಿ ಪ್ರಾದೇಶಿಕ ಮಟ್ಟದಲ್ಲಿ ಜಾರಿಗೊಳಿಸಲು ಸಾಧ್ಯವಾಯಿತು’ ಎಂದು ಪ್ರೊ.ನಿತ್ಯಾನಂದ ಬಿ.ಶೆಟ್ಟಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>