‘ಸ್ವಾಮಿ ಅವರೇ, ಶೈಲಾಪುರ, ಕೆ.ಟಿ.ಹಳ್ಳಿ, ಬೆಳ್ಳಿಬಟ್ಟಲು, ದೇವಲಕೆರೆಯಲ್ಲಿ ಒಂದೂವರೆ ತಿಂಗಳಿಂದ ಇಸ್ಪೀಟ್ ಆಡಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನೀವು ಏನು ಮಾಡುತ್ತೀದ್ದೀರಿ? ಎಂದು ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನೀವು ಸಾಹೇಬರ ಹತ್ತಿರ ಬಂದು ಇಸ್ಪೀಟ್ ನಿಲ್ಲಿಸುವುದಾಗಿ ಹೇಳಿ. ಉಮೇಶಪ್ಪ ನಿಮ್ಮ ಸಂಬಂಧಿ. ಅವರು ನಿಮಗೆ ಆಟ ಆಡಿಸಲು ಅನುಮತಿ ಕೊಡಿಸಿದ್ದಾರೆ ಎನ್ನುವುದು ಗೊತ್ತು. ಉಮೇಶಪ್ಪ ಅವರಿಗೆ ತೊಂದರೆ ಆಗಬಾರದು ಎಂದು ಸುಮ್ಮನೆ ಇದ್ದೀನಿ. ಆಟ ನಿಲ್ಲಿಸದಿದ್ದರೆ ದಾಳಿ ಮಾಡಿಸುವುದು ನನಗೆ ಗೊತ್ತಿದೆ’ ಎಂದು ಕಾನ್ಸ್ಟೆಬಲ್ ಹೇಳಿದ್ದಾರೆ.