ಅಧಿಕಾರಿಗಳ ವಿರುದ್ಧ ಆಕ್ರೋಶ: ಮನೆ ಮೇಲೆ ದೊಡ್ಡ ಮರ ಬಿದ್ದಿರುವುದಲ್ಲದೇ ವಿದ್ಯುತ್ ತಂತಿ ಸಹ ಬಿದ್ದಿದೆ. ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ತಂತಿ ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆ ಎಇ ಅವರಿಗೆ ಕರೆ ಮಾಡಿದರೆ ‘ಜಂಪ್ ತೆಗೆಸಿದ್ದೇವೆ. ಮರ ಮತ್ತು ಕೊಂಬೆ ತೆರವುಗೊಳಿಸುವ ಜವಾಬ್ದಾರಿ ನಮ್ಮದ್ದಲ್ಲ’ ಎಂಬ ಉತ್ತರ ನೀಡುತ್ತಾರೆ. ಇಲ್ಲಿ ವಿದ್ಯುತ್ ಪಾಸಾಗಿ ಗ್ರೌಂಡ್ ಬರುತ್ತಿದೆ. ಯಾರಿಗಾದರೂ ಹೆಚ್ಚುಕಡಿಮೆಯಾದರೆ ಯಾರು ಜವಾಬ್ದಾರರು. ಸಂಬಂಧಪಟ್ಟವರು ಶೀಘ್ರ ಮರ ತೆರವುಗೊಳಿಸುವುದರ ಜೊತೆಗೆ ತಂತಿ ಸರಿಪಡಿಸುವಂತೆ ಬಾಲಾಜಿ, ಶಿವಶಂಕರ್, ಜಗನ್ನಾಥ್, ವೆಂಕಟಪ್ಪ, ಗಂಗಾಧರ್, ರಂಗಧಾಮಪ್ಪ, ರಾಮದಾಸ್, ಸತೀಶ್, ನಾರಾಯಣಪ್ಪ, ನಾಗರಾಜಪ್ಪ, ಜ್ಯೋತಿ, ತಿಮ್ಮರಾಜಮ್ಮ, ನಿರ್ಮಲಮ್ಮ, ಆಟೊ ಶಿವಪ್ಪ, ಲಕ್ಷ್ಮೀದೇವಮ್ಮ ಒತ್ತಾಯಿಸಿದ್ದಾರೆ.