ಬೆಳಿಗ್ಗೆ 11ಕ್ಕೆ ಸಭೆ ಆರಂಭವಾಯಿತು. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 11.15ಕ್ಕೆ ಕಾಂಗ್ರೆಸ್ ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ.ರಾಜಣ್ಣ, ಚನ್ನಮಲ್ಲಯ್ಯ, ಶಾಂತಲಾ ರಾಜಣ್ಣ ಸಭೆಗೆ ಬಂದರು. ಆ ನಂತರ ಬಿಜೆಪಿಯ
ವೈ.ಎಚ್.ಹುಚ್ಚಯ್ಯ, ಜೆಡಿಎಸ್ನ ತಿಮ್ಮಣ್ಣ ಹೀಗೆ ಒಟ್ಟು 14 ಮಂದಿ ಸದಸ್ಯರು ಹಾಜರಾದರು. ಆದರೆ ಸಭೆ ನಡೆಸಲು ಅಗತ್ಯವಾದ ಸದಸ್ಯ ಬಲ ಇಲ್ಲದ ಕಾರಣ ಸಭೆ ಮುಂದೂಡಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.