‘ಅ.8ರಂದು ಬೆಳಿಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೆ.24ರಂದು ನನಗೆ ಇ.ಡಿಯಿಂದ ಕೋರಿಯರ್ನಲ್ಲಿ ಸಮನ್ಸ್ ಬಂದಿದೆ. ಮತ್ತೆ ಸೋಮವಾರ (ಸೆ.30) ಇ.ಡಿಯಿಂದ ದೂರವಾಣಿ ಕರೆ ಮಾಡಿದ್ದರು. 8ರಂದು ದಸರಾ ಪ್ರಯುಕ್ತ ರಜೆ ಇದೆ. ಆದ ಕಾರಣ ಅ.9ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರು. ಈ ಸಂಬಂಧ ನನಗೆ ಇ–ಮೇಲ್ ಸಹ ಮಾಡಿದ್ದಾರೆ’ ಎಂದು ಕೆ.ಎನ್.ರಾಜಣ್ಣ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.