ವರದಿಗೆ ಸೂಚನೆ: ಹೆಬ್ಬೂರಿಗೆ ಭೇಟಿ ನೀಡಿದಾಗ ಅಲ್ಲಿನ ಪಡಿತರ ಅಂಗಡಿಯೊಂದರಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಹಳೇ ತೂಕ ಮಾಪಕ ಯಂತ್ರ ಇಟ್ಟಿದ್ದಾರೆ ಎಂದು ಕೆಲವರು ದೂರಿದರು. ಮಾಲೀಕ ಯಾವುದೇ ವ್ಯತ್ಯಾಸ ಮಾಡುತ್ತಿಲ್ಲ ಎಂದು ಪ್ರತಿಪಾದಿಸಿದರು. ಅಧಿಕಾರಿಗಳು ಯಂತ್ರ ಪರಿಶೀಲಿಸಿದಾಗ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಈ ಬಗ್ಗೆ ಗುಂಪುಗಳ ನಡುವೆ ವಾದಗಳು ಜರುಗಿದವು. ಆಗ ಸಚಿವರು, ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ವರದಿ ನೀಡುವಂತೆ ಶ್ರೀನಿವಾಸಯ್ಯ ಅವರಿಗೆ ನಿರ್ದೇಶಿಸಿದರು.