<p><strong>ತುಮಕೂರು:</strong> ಪ್ರಸ್ತುತ ಮಕ್ಕಳಲ್ಲಿ ನೈತಿಕತೆ, ಮಾನವೀಯ ಮೌಲ್ಯ, ಕೌಟುಂಬಿಕ ಚಿಂತನೆ ಮರೆಯಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು, ಪ್ರಧಾನ್ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿ ಪ್ರಧಾನ ವೆಂಕಪ್ಪಯ್ಯ ವಿರಚಿತ ‘ಶ್ರೀರಾಮಕಥಾಮೃತ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.</p>.<p>ಆಧುನಿಕತೆ ಒಪ್ಪಿಕೊಳ್ಳುವ ಕಾಲಘಟ್ಟದಲ್ಲೂ ರಾಮಾಯಣದ ಮೌಲ್ಯಗಳ ಅವಶ್ಯಕತೆ ಇದೆ. ಜನ ಸಾಮಾನ್ಯರಿಗೆ ರಾಮಾಯಣ, ಮಹಾಭಾರತದ ಪರಿಚಯ ತುಂಬಾ ಅಗತ್ಯ. ಜಿಲ್ಲೆಯ ಪಿ.ವಿ.ನಾರಾಯಣ್ ಅವರು ಪ್ರಧಾನ್ ವೆಂಕಪ್ಪಯ್ಯ ಅವರ ಕೃತಿ ಅನುವಾದ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.</p>.<p>ವಿಮರ್ಶಕ ಆರ್.ಲಕ್ಷ್ಮಿನಾರಾಯಣ್, ‘ರಾಮಾಯಣದಲ್ಲಿ ಇರುವ ಆರು ಕಾಂಡಗಳು, ಹತ್ತು ಸಾವಿರ ಪದ್ಯಗಳು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿವೆ’ ಎಂದು ತಿಳಿಸಿದರು.</p>.<p>ಲೇಖಕ ಪಿ.ವಿ.ನಾರಾಯಣ್, ಸಂಶೋಧಕ ಬಿ.ನಂಜುಂಡಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಕಂಟಲಗೆರೆ ಸಣ್ಣಹೊನ್ನಯ್ಯ, ಚಿಕ್ಕಬೆಳ್ಳಾವಿ ಶಿವಕುಮಾರ್, ಎಲೆರಾಂಪುರ ರುದ್ರಮೂರ್ತಿ, ಎಂ.ಗೋವಿಂದರಾಯ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಪ್ರಸ್ತುತ ಮಕ್ಕಳಲ್ಲಿ ನೈತಿಕತೆ, ಮಾನವೀಯ ಮೌಲ್ಯ, ಕೌಟುಂಬಿಕ ಚಿಂತನೆ ಮರೆಯಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು, ಪ್ರಧಾನ್ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿ ಪ್ರಧಾನ ವೆಂಕಪ್ಪಯ್ಯ ವಿರಚಿತ ‘ಶ್ರೀರಾಮಕಥಾಮೃತ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.</p>.<p>ಆಧುನಿಕತೆ ಒಪ್ಪಿಕೊಳ್ಳುವ ಕಾಲಘಟ್ಟದಲ್ಲೂ ರಾಮಾಯಣದ ಮೌಲ್ಯಗಳ ಅವಶ್ಯಕತೆ ಇದೆ. ಜನ ಸಾಮಾನ್ಯರಿಗೆ ರಾಮಾಯಣ, ಮಹಾಭಾರತದ ಪರಿಚಯ ತುಂಬಾ ಅಗತ್ಯ. ಜಿಲ್ಲೆಯ ಪಿ.ವಿ.ನಾರಾಯಣ್ ಅವರು ಪ್ರಧಾನ್ ವೆಂಕಪ್ಪಯ್ಯ ಅವರ ಕೃತಿ ಅನುವಾದ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.</p>.<p>ವಿಮರ್ಶಕ ಆರ್.ಲಕ್ಷ್ಮಿನಾರಾಯಣ್, ‘ರಾಮಾಯಣದಲ್ಲಿ ಇರುವ ಆರು ಕಾಂಡಗಳು, ಹತ್ತು ಸಾವಿರ ಪದ್ಯಗಳು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿವೆ’ ಎಂದು ತಿಳಿಸಿದರು.</p>.<p>ಲೇಖಕ ಪಿ.ವಿ.ನಾರಾಯಣ್, ಸಂಶೋಧಕ ಬಿ.ನಂಜುಂಡಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಕಂಟಲಗೆರೆ ಸಣ್ಣಹೊನ್ನಯ್ಯ, ಚಿಕ್ಕಬೆಳ್ಳಾವಿ ಶಿವಕುಮಾರ್, ಎಲೆರಾಂಪುರ ರುದ್ರಮೂರ್ತಿ, ಎಂ.ಗೋವಿಂದರಾಯ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>