<p><strong>ಶಿರಾ:</strong> ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಕಳೆದ ವರ್ಷ ಮುಂಗಾರು ವಿಫಲವಾಗಿ, ತೀವ್ರ ಬರದಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೇವಲ ನೈಜ ಫಹಣಿದಾರರಿಗೆ ಅಲ್ಪ ಸ್ವಲ್ಪ ಪರಿಹಾರ ವಿತರಿಸಿದ್ದು. ಜಂಟಿ ಫಹಣಿ ಖಾತೆ ಬದಲಾವಣೆ ಆಗದೆ ಇರುವ ಶೇ 30ರಷ್ಟು ರೈತರಿಗೆ ಪರಿಹಾರ ದೊರೆತಿಲ್ಲ. ಎಕರೆಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡಬೇಕು. 2023-24ನೇ ಸಾಲಿನಲ್ಲಿ ಫಸಲ್ ಭೀಮ ಯೋಜನೆಯ ವಿಮಾ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಿಸಬೇಕು ಎಂದರು.</p>.<p>ಬಗರ್ ಹುಕುಂ ಸಮಿತಿಯಲ್ಲಿ ಜಮೀನು ಇಲ್ಲದ ನೈಜ ಪಲಾನುಭವಿಗಳಿಗೆ ತಕ್ಷಣ ಸಾಗುವಳಿ ಪತ್ರ ವಿತರಿಸಬೇಕು. ಅಕ್ರಮ– ಸಕ್ರಮ ಯೋಜನೆಯಡಿ ರೈತರು ಟಿ.ಸಿಗಾಗಿ ₹30 ಸಾವಿರ ತುಂಬಿ 15 ವರ್ಷ ಕಳೆದರೂ ಟಿ.ಸಿ ನೀಡಿಲ್ಲ. ಕೂಡಲೇ ಕ್ರಮ ವಹಿಸಿ ಹಣ ತುಂಬಿರುವ ಎಲ್ಲ ರೈತರಿಗೆ ಕಂಬ, ತಂತಿ ಮತ್ತು ಟಿ.ಸಿ ಅಳವಡಿಸುವುದು ಸೇರಿದಂತೆ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಖಜಾಂಚಿ ಮುಕುಂದಪ್ಪ, ಜಯಣ್ಣ, ರಾಮಣ್ಣ, ಪರುಸಪ್ಪ, ಎಸ್.ಜಗದೀಶ್, ಎಸ್.ರಾಮಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ:</strong> ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ಕಳೆದ ವರ್ಷ ಮುಂಗಾರು ವಿಫಲವಾಗಿ, ತೀವ್ರ ಬರದಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೇವಲ ನೈಜ ಫಹಣಿದಾರರಿಗೆ ಅಲ್ಪ ಸ್ವಲ್ಪ ಪರಿಹಾರ ವಿತರಿಸಿದ್ದು. ಜಂಟಿ ಫಹಣಿ ಖಾತೆ ಬದಲಾವಣೆ ಆಗದೆ ಇರುವ ಶೇ 30ರಷ್ಟು ರೈತರಿಗೆ ಪರಿಹಾರ ದೊರೆತಿಲ್ಲ. ಎಕರೆಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡಬೇಕು. 2023-24ನೇ ಸಾಲಿನಲ್ಲಿ ಫಸಲ್ ಭೀಮ ಯೋಜನೆಯ ವಿಮಾ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಿಸಬೇಕು ಎಂದರು.</p>.<p>ಬಗರ್ ಹುಕುಂ ಸಮಿತಿಯಲ್ಲಿ ಜಮೀನು ಇಲ್ಲದ ನೈಜ ಪಲಾನುಭವಿಗಳಿಗೆ ತಕ್ಷಣ ಸಾಗುವಳಿ ಪತ್ರ ವಿತರಿಸಬೇಕು. ಅಕ್ರಮ– ಸಕ್ರಮ ಯೋಜನೆಯಡಿ ರೈತರು ಟಿ.ಸಿಗಾಗಿ ₹30 ಸಾವಿರ ತುಂಬಿ 15 ವರ್ಷ ಕಳೆದರೂ ಟಿ.ಸಿ ನೀಡಿಲ್ಲ. ಕೂಡಲೇ ಕ್ರಮ ವಹಿಸಿ ಹಣ ತುಂಬಿರುವ ಎಲ್ಲ ರೈತರಿಗೆ ಕಂಬ, ತಂತಿ ಮತ್ತು ಟಿ.ಸಿ ಅಳವಡಿಸುವುದು ಸೇರಿದಂತೆ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಖಜಾಂಚಿ ಮುಕುಂದಪ್ಪ, ಜಯಣ್ಣ, ರಾಮಣ್ಣ, ಪರುಸಪ್ಪ, ಎಸ್.ಜಗದೀಶ್, ಎಸ್.ರಾಮಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>