‘ಮಳೆ ಹೆಚ್ಚಾಗಿದ್ದರಿಂದ ಹುರುಳಿಕಾಯಿ ತಾಕುಗಳು ನಾಶವಾಗಿವೆ. ಉಳಿದು ಕೊಂಡಿರುವ ತಾಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳುವರಿ ಬರುತ್ತಿದ್ದು, ಬೇಡಿಕೆ ಹೆಚ್ಚು ಇರುವುದರಿಂದ ಬೆಲೆ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆಯೂ ಇದೇ ರೀತಿ ಮಳೆ ಹೆಚ್ಚಾದಾಗ ಬೆಲೆಯೂ ಏರಿತ್ತು’ ಎನ್ನುತ್ತಾರೆ ಜೋನಿಗರಹಳ್ಳಿ ತರಕಾರಿ ಹೂವು ಬೆಳೆಗಾರ ಬಸವರಾಜು.