<figcaption>""</figcaption>.<figcaption>""</figcaption>.<p><strong>ತುಮಕೂರು: </strong>ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಾ ಕ್ಷೇತ್ರದಲ್ಲಿ ಶೇ 44.13 ರಷ್ಟು ಮತದಾನವಾಗಿದೆ.</p>.<p>ತಾಲ್ಲೂಕಿನಲ್ಲಿ ಶಾಂತಿಯುತ ಮತದಾನವಾಗುತ್ತಿದೆ. ಗೋಮಾರದನಹಳ್ಳಿ, ದ್ವಾರಾಳು, ಹೊಸಹಳ್ಳಿ ಮತಗಟ್ಟೆಯಲ್ಲಿ ಜನರು ಸಾಲುಗಟ್ಟಿದ್ದಾರೆ.</p>.<p>ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾದ ಜ್ಯೋತಿ ನಗರ ಮತಗಟ್ಟೆಯಲ್ಲಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ ಮಾಡಿದರು.</p>.<p>ದಿ. ಶಾಸಕ ಸತ್ಯನಾರಾಯಣ ಅವರ ಪತ್ನಿಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಸ್ವಗ್ರಾಮ ಭುವನಹಳ್ಳಿಯಲ್ಲಿ 10 ಗಂಟೆ ಸುಮಾರಿಗೆ ಶೇ 31ರಷ್ಟು ಮತದಾನವಾಗಿದೆ.</p>.<p>ಗ್ರಾಮದಲ್ಲಿ 33, 33a ಮತಗಟ್ಟೆಯಲ್ಲಿ ಮತದಾನ ನಡೆದಿದೆ. 33 ಮತಗಟ್ಟೆಯಲ್ಲಿ 582 ಮತಗಳಿದ್ದಯ 181 ಮತದಾನವಾಗಿದೆ.</p>.<p>33a ಮತಗಟ್ಟೆಯಲ್ಲಿ 646 ಮತಗಳಿದ್ದು 168 ಮತಗಳು ಚಲಾವಣೆ ಆಗಿದೆ.</p>.<div style="text-align:center"><figcaption><strong>ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ ಮಾಡಿದರು.</strong></figcaption></div>.<p><strong>ಸಮಾಧಿಗೆ ಪೂಜೆ<br />ತುಮಕೂರು: </strong>ಭುವನಹಳ್ಳಿಯಲ್ಲಿರುವ ದಿ.ಶಾಸಕ ಸತ್ಯನಾರಾಯಣ ಅವರ ಸಮಾಧಿಗೆ ಬೆಳಿಗ್ಗೆಯೇ ಜೆಡಿಎಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.</p>.<p>ಸತ್ಯನಾರಾಯಣ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸೋಮವಾರ ಸಮಾಧಿಗೆ ಪೂಜೆ ಸಲ್ಲಿಸಿದ್ದರು.</p>.<p>ಗ್ರಾಮದ ಮುಖ್ಯರಸ್ತೆಯ ಬದಿ ಮೂರು ಪಕ್ಷಗಳ ಕಾರ್ಯಕರ್ತರು ಕುಳಿತು ಮತದಾನ ಕೇಂದ್ರಕ್ಕೆ ಬರುವವರಿಗೆ ಮತದಾನದ ಚೀಟಿ ನೀಡುತ್ತಿದ್ದಾರೆ.</p>.<div style="text-align:center"><figcaption><strong>ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಮತಚಲಾಯಿಸಿದರು.</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<p><strong>ತುಮಕೂರು: </strong>ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಾ ಕ್ಷೇತ್ರದಲ್ಲಿ ಶೇ 44.13 ರಷ್ಟು ಮತದಾನವಾಗಿದೆ.</p>.<p>ತಾಲ್ಲೂಕಿನಲ್ಲಿ ಶಾಂತಿಯುತ ಮತದಾನವಾಗುತ್ತಿದೆ. ಗೋಮಾರದನಹಳ್ಳಿ, ದ್ವಾರಾಳು, ಹೊಸಹಳ್ಳಿ ಮತಗಟ್ಟೆಯಲ್ಲಿ ಜನರು ಸಾಲುಗಟ್ಟಿದ್ದಾರೆ.</p>.<p>ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾದ ಜ್ಯೋತಿ ನಗರ ಮತಗಟ್ಟೆಯಲ್ಲಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ ಮಾಡಿದರು.</p>.<p>ದಿ. ಶಾಸಕ ಸತ್ಯನಾರಾಯಣ ಅವರ ಪತ್ನಿಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಸ್ವಗ್ರಾಮ ಭುವನಹಳ್ಳಿಯಲ್ಲಿ 10 ಗಂಟೆ ಸುಮಾರಿಗೆ ಶೇ 31ರಷ್ಟು ಮತದಾನವಾಗಿದೆ.</p>.<p>ಗ್ರಾಮದಲ್ಲಿ 33, 33a ಮತಗಟ್ಟೆಯಲ್ಲಿ ಮತದಾನ ನಡೆದಿದೆ. 33 ಮತಗಟ್ಟೆಯಲ್ಲಿ 582 ಮತಗಳಿದ್ದಯ 181 ಮತದಾನವಾಗಿದೆ.</p>.<p>33a ಮತಗಟ್ಟೆಯಲ್ಲಿ 646 ಮತಗಳಿದ್ದು 168 ಮತಗಳು ಚಲಾವಣೆ ಆಗಿದೆ.</p>.<div style="text-align:center"><figcaption><strong>ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ ಮಾಡಿದರು.</strong></figcaption></div>.<p><strong>ಸಮಾಧಿಗೆ ಪೂಜೆ<br />ತುಮಕೂರು: </strong>ಭುವನಹಳ್ಳಿಯಲ್ಲಿರುವ ದಿ.ಶಾಸಕ ಸತ್ಯನಾರಾಯಣ ಅವರ ಸಮಾಧಿಗೆ ಬೆಳಿಗ್ಗೆಯೇ ಜೆಡಿಎಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.</p>.<p>ಸತ್ಯನಾರಾಯಣ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸೋಮವಾರ ಸಮಾಧಿಗೆ ಪೂಜೆ ಸಲ್ಲಿಸಿದ್ದರು.</p>.<p>ಗ್ರಾಮದ ಮುಖ್ಯರಸ್ತೆಯ ಬದಿ ಮೂರು ಪಕ್ಷಗಳ ಕಾರ್ಯಕರ್ತರು ಕುಳಿತು ಮತದಾನ ಕೇಂದ್ರಕ್ಕೆ ಬರುವವರಿಗೆ ಮತದಾನದ ಚೀಟಿ ನೀಡುತ್ತಿದ್ದಾರೆ.</p>.<div style="text-align:center"><figcaption><strong>ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಮತಚಲಾಯಿಸಿದರು.</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>