<p><strong>ತುಮಕೂರು</strong>: ಬಂಡಾಯ, ದಲಿತ ಸಾಹಿತ್ಯದ ಸೃಷ್ಟಿಗೆ ಮೂಲ ಕಾರಣವಾಗಿರುವ ಸಿದ್ಧಲಿಂಗಯ್ಯ ಅವರು ನಾಟಕ, ವಿಮರ್ಶೆ, ಪ್ರಬಂಧ,ಆತ್ಮಕಥನ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ದಲಿತ ಕವಿ ಎಂಬುದಕ್ಕಿಂತ ಅವರೊಬ್ಬ ನಿಜವಾದ ‘ಕಲಿತ ಕವಿ’ ಎಂದು ಸರ್ಕಾರಿ ಅಭಿಯೋಜಕ ಎಸ್. ರಾಜಣ್ಣ ಅಭಿಪ್ರಾಯಪಟ್ಟರು.</p>.<p>ದಲಿತ ಛಲವಾದಿ ಮಹಾಸಭಾ, ಭೈರವ ಕಲಾಭವನದಿಂದ ಹಮ್ಮಿಕೊಂಡಿದ್ದ ಡಾ.ಸಿದ್ಧಲಿಂಗಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲ್ಯದಿಂದಲೇ ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಸಾಮಾಜಿಕ ಜನಜೀವನ, ನೋವು– ನಲಿವುಗಳನ್ನು ಕಾವ್ಯ, ಗದ್ಯ, ಬರಹಗಳ ಮೂಲಕ ಚಿತ್ರಿಸಿದ್ದರು’ ಎಂದು ನೆನಪಿಸಿಕೊಂಡರು.</p>.<p>ವರ್ಚುವಲ್ ಮೂಲಕ ಮಾತನಾಡಿದ ಡಾ.ಗೋವಿಂದರಾಯ, ‘ಸಿದ್ಧಲಿಂಗಯ್ಯ ವಿಶಿಷ್ಟ ಪ್ರತಿಭೆ. ಕವಿತೆಯಿಂದ ಸಮಾಜವನ್ನು ಎಚ್ಚರಿಸುವ, ತಿದ್ದುವ, ಪ್ರತಿಭಟಿಸುವ ಕೆಲಸ ಮಾಡಿದರು’ ಎಂದು ತಿಳಿಸಿದರು.</p>.<p>ಡಾ.ಸಿದ್ಧಲಿಂಗಯ್ಯ ಸಹಪಾಠಿ ಗೆಳೆಯರಾಗಿದ್ದ ಬಿ.ಎಸ್. ಗಂಗಾಧರಯ್ಯ,ಅವರೊಂದಿಗಿನ ವ್ಯಾಸಂಗದ ಸಮಯವನ್ನು ಸ್ಮರಿಸಿದರು. ವಿಶೇಷವಾಗಿ ಭೂಸಾ ಚಳವಳಿಯಲ್ಲಿ ಭಾಗಿಯಾಗಿದ್ದ ರೀತಿ, ಕವಿಯಾಗಿ ಕ್ರಾಂತಿಗೀತೆ, ಸಾಹಿತ್ಯ ರಚನೆ, ದಲಿತ ಹೋರಾಟಕ್ಕೆಆಸರೆಯಾಗಿದ್ದ ಬಗ್ಗೆ ನೆನಪು ಮಾಡಿಕೊಂಡರು.</p>.<p>ಮಹಾಸಭಾ ಅಧ್ಯಕ್ಷ ಡಾ.ಪಿ. ಚಂದ್ರಪ್ಪ ಮಾತನಾಡಿದರು.</p>.<p>ವರ್ಚುವಲ್ ತಾಂತ್ರಿಕ ಸಂವಾದದಲ್ಲಿ ಜಿ. ಹರ್ಷಧರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ್, ಎಚ್.ಬಿ. ಪುಟ್ಟಬೋರಯ್ಯ, ರಾಜಯ್ಯ, ನಂಜುಂಡಯ್ಯ, ಸಿದ್ಧನಂಜಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಬಂಡಾಯ, ದಲಿತ ಸಾಹಿತ್ಯದ ಸೃಷ್ಟಿಗೆ ಮೂಲ ಕಾರಣವಾಗಿರುವ ಸಿದ್ಧಲಿಂಗಯ್ಯ ಅವರು ನಾಟಕ, ವಿಮರ್ಶೆ, ಪ್ರಬಂಧ,ಆತ್ಮಕಥನ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ದಲಿತ ಕವಿ ಎಂಬುದಕ್ಕಿಂತ ಅವರೊಬ್ಬ ನಿಜವಾದ ‘ಕಲಿತ ಕವಿ’ ಎಂದು ಸರ್ಕಾರಿ ಅಭಿಯೋಜಕ ಎಸ್. ರಾಜಣ್ಣ ಅಭಿಪ್ರಾಯಪಟ್ಟರು.</p>.<p>ದಲಿತ ಛಲವಾದಿ ಮಹಾಸಭಾ, ಭೈರವ ಕಲಾಭವನದಿಂದ ಹಮ್ಮಿಕೊಂಡಿದ್ದ ಡಾ.ಸಿದ್ಧಲಿಂಗಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲ್ಯದಿಂದಲೇ ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಸಾಮಾಜಿಕ ಜನಜೀವನ, ನೋವು– ನಲಿವುಗಳನ್ನು ಕಾವ್ಯ, ಗದ್ಯ, ಬರಹಗಳ ಮೂಲಕ ಚಿತ್ರಿಸಿದ್ದರು’ ಎಂದು ನೆನಪಿಸಿಕೊಂಡರು.</p>.<p>ವರ್ಚುವಲ್ ಮೂಲಕ ಮಾತನಾಡಿದ ಡಾ.ಗೋವಿಂದರಾಯ, ‘ಸಿದ್ಧಲಿಂಗಯ್ಯ ವಿಶಿಷ್ಟ ಪ್ರತಿಭೆ. ಕವಿತೆಯಿಂದ ಸಮಾಜವನ್ನು ಎಚ್ಚರಿಸುವ, ತಿದ್ದುವ, ಪ್ರತಿಭಟಿಸುವ ಕೆಲಸ ಮಾಡಿದರು’ ಎಂದು ತಿಳಿಸಿದರು.</p>.<p>ಡಾ.ಸಿದ್ಧಲಿಂಗಯ್ಯ ಸಹಪಾಠಿ ಗೆಳೆಯರಾಗಿದ್ದ ಬಿ.ಎಸ್. ಗಂಗಾಧರಯ್ಯ,ಅವರೊಂದಿಗಿನ ವ್ಯಾಸಂಗದ ಸಮಯವನ್ನು ಸ್ಮರಿಸಿದರು. ವಿಶೇಷವಾಗಿ ಭೂಸಾ ಚಳವಳಿಯಲ್ಲಿ ಭಾಗಿಯಾಗಿದ್ದ ರೀತಿ, ಕವಿಯಾಗಿ ಕ್ರಾಂತಿಗೀತೆ, ಸಾಹಿತ್ಯ ರಚನೆ, ದಲಿತ ಹೋರಾಟಕ್ಕೆಆಸರೆಯಾಗಿದ್ದ ಬಗ್ಗೆ ನೆನಪು ಮಾಡಿಕೊಂಡರು.</p>.<p>ಮಹಾಸಭಾ ಅಧ್ಯಕ್ಷ ಡಾ.ಪಿ. ಚಂದ್ರಪ್ಪ ಮಾತನಾಡಿದರು.</p>.<p>ವರ್ಚುವಲ್ ತಾಂತ್ರಿಕ ಸಂವಾದದಲ್ಲಿ ಜಿ. ಹರ್ಷಧರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ್, ಎಚ್.ಬಿ. ಪುಟ್ಟಬೋರಯ್ಯ, ರಾಜಯ್ಯ, ನಂಜುಂಡಯ್ಯ, ಸಿದ್ಧನಂಜಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>