ದಲಿತ ಛಲವಾದಿ ಮಹಾಸಭಾ, ಭೈರವ ಕಲಾಭವನದಿಂದ ಹಮ್ಮಿಕೊಂಡಿದ್ದ ಡಾ.ಸಿದ್ಧಲಿಂಗಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲ್ಯದಿಂದಲೇ ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಸಾಮಾಜಿಕ ಜನಜೀವನ, ನೋವು– ನಲಿವುಗಳನ್ನು ಕಾವ್ಯ, ಗದ್ಯ, ಬರಹಗಳ ಮೂಲಕ ಚಿತ್ರಿಸಿದ್ದರು’ ಎಂದು ನೆನಪಿಸಿಕೊಂಡರು.