<p><strong>ತುಮಕೂರು: </strong>ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯು ನಮಗೆ ಹೊಂದಿಕೊಳ್ಳದ ಅಪ್ರಯೋಜಕ ವಿದೇಶಿ ಮಾದರಿಯ ಕಾಪಿಯಾಗಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಜನ ಚಳವಳಿ ಕೇಂದ್ರದಲ್ಲಿ ಸಿಪಿಐಎಂ ಕೈಗಾರಿಕಾ ಕಾರ್ಮಿಕರ ಘಟಕದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಯೋಜನೆ ರೂಪಿಸುವ ಹಂತದಲ್ಲಿ ಇದನ್ನು ವಿರೋಧಿಸಿದಾಗ ಮೌನವಾಗಿದ್ದವರು, ಈಗ ಜಾರಿ ಹಂತದಲ್ಲಿ ಕೂಗಾಡಿದರೇನು ಪ್ರಯೋಜನ ಎಂದು ಪ್ರಶ್ನಿಸಿದರು.</p>.<p>ಧರ್ಮದ ಹೆಸರಿನಲ್ಲಿ ಅಮಲೇರಿಸಿಕೊಂಡು ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಕೊಲೆಗಡುಕತನವನ್ನು ಲಜ್ಜೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದರು.</p>.<p>ಕಾರ್ಮಿಕ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ, ದುಡಿಯುವವರ ಸಂಕಟಗಳಿಗೆ ಸ್ಪಂದಿಸದೆ ಲಾಭ ಮಾತ್ರ ಲೆಕ್ಕ ಹಾಕುವ ಅಮಾನವೀಯತೆ ಕಂಡುಬರುತ್ತಿದೆ ಎಂದರು.</p>.<p>ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕೋವಿಡ್ ಸಂಕಟಗಳ ನಡುವೆ ಸರ್ಕಾರ ಬೆಲೆ ಏರಿಕೆ ಮಾಡಿದೆ. ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳು ಬದುಕನ್ನು ಮತ್ತಷ್ಟು ದುಸ್ತರಗೊಳಸಿವೆ’ ಎಂದು ಆರೋಪಿಸಿದರು.</p>.<p>ಸಿಪಿಐಎಂ ನಗರ ಸಮಿತಿಯ ಷಣ್ಮಖಪ್ಪ, ಕಾರ್ಮಿಕರ ಮುಖಂಡರಾದ ಲೋಕೇಶ್, ರಂಗಧಾಮಯ್ಯ ಇದ್ದರು. ಕೈಗಾರಿಕಾ ಕಾರ್ಮಿಕರ ಘಟಕ ಕಾರ್ಯದರ್ಶಿಯಾಗಿ ಗಿರೀಶ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯು ನಮಗೆ ಹೊಂದಿಕೊಳ್ಳದ ಅಪ್ರಯೋಜಕ ವಿದೇಶಿ ಮಾದರಿಯ ಕಾಪಿಯಾಗಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಜನ ಚಳವಳಿ ಕೇಂದ್ರದಲ್ಲಿ ಸಿಪಿಐಎಂ ಕೈಗಾರಿಕಾ ಕಾರ್ಮಿಕರ ಘಟಕದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಯೋಜನೆ ರೂಪಿಸುವ ಹಂತದಲ್ಲಿ ಇದನ್ನು ವಿರೋಧಿಸಿದಾಗ ಮೌನವಾಗಿದ್ದವರು, ಈಗ ಜಾರಿ ಹಂತದಲ್ಲಿ ಕೂಗಾಡಿದರೇನು ಪ್ರಯೋಜನ ಎಂದು ಪ್ರಶ್ನಿಸಿದರು.</p>.<p>ಧರ್ಮದ ಹೆಸರಿನಲ್ಲಿ ಅಮಲೇರಿಸಿಕೊಂಡು ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಕೊಲೆಗಡುಕತನವನ್ನು ಲಜ್ಜೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದರು.</p>.<p>ಕಾರ್ಮಿಕ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ, ದುಡಿಯುವವರ ಸಂಕಟಗಳಿಗೆ ಸ್ಪಂದಿಸದೆ ಲಾಭ ಮಾತ್ರ ಲೆಕ್ಕ ಹಾಕುವ ಅಮಾನವೀಯತೆ ಕಂಡುಬರುತ್ತಿದೆ ಎಂದರು.</p>.<p>ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕೋವಿಡ್ ಸಂಕಟಗಳ ನಡುವೆ ಸರ್ಕಾರ ಬೆಲೆ ಏರಿಕೆ ಮಾಡಿದೆ. ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳು ಬದುಕನ್ನು ಮತ್ತಷ್ಟು ದುಸ್ತರಗೊಳಸಿವೆ’ ಎಂದು ಆರೋಪಿಸಿದರು.</p>.<p>ಸಿಪಿಐಎಂ ನಗರ ಸಮಿತಿಯ ಷಣ್ಮಖಪ್ಪ, ಕಾರ್ಮಿಕರ ಮುಖಂಡರಾದ ಲೋಕೇಶ್, ರಂಗಧಾಮಯ್ಯ ಇದ್ದರು. ಕೈಗಾರಿಕಾ ಕಾರ್ಮಿಕರ ಘಟಕ ಕಾರ್ಯದರ್ಶಿಯಾಗಿ ಗಿರೀಶ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>