<p><strong>ಕುಣಿಗಲ್:</strong> ಪಟ್ಟಣದ ಹೃದಯ ಭಾಗವಾದ ಗ್ರಾಮ ದೇವತಾ ವೃತ್ತದ ಮಳಿಗೆಯ ಮಾಲೀಕರೊಬ್ಬರು ಮುಖ್ಯರಸ್ತೆಯಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಸ್ಥಳೀಯ ಆಡಳಿತ ಮೌನವಹಿಸಿರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಇದೇ ಭಾಗದಲ್ಲಿ ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳನ್ನು ಅಂಗವಿಕಲರು ಅಂಗಲಾಚಿದರೂ ಬಿಡದೆ ಜೆಸಿಬಿ ಬಳಸಿ ಪುರಸಭೆ ಅಧಿಕಾರಿಗಳು ತೆರವು ಮಾಡಿದ್ದರು. ಹಣಬಲವುಳ್ಳ ಮಳಿಗೆ ಮಾಲೀಕರಿಗೆ ಮೂರು ಅಂತಸ್ತಿನ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿದ್ದಾರೆ.</p>.<p>ತುಮಕೂರು- ಮೈಸೂರು ಕಡೆ ಸಂಚರಿಸುವ ವಾಹನಗಳ ಕೇಂದ್ರ ಸ್ಥಾನವಾಗಿರುವ ಗ್ರಾಮದೇವತಾ ವೃತ್ತದಲ್ಲಿ ರಸ್ತೆಗೆ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಮೌನವಹಿಸಿದ್ದಾರೆ.</p>.<p>ಪುರಸಭೆಯಲ್ಲಿ ಬಡವರಿಗೊಂದು ನೀತಿ, ಹಣಬಲವುಳ್ಳವರಿಗೇ ಒಂದು ನೀತಿಯಾಗಿದೆ. ಸಂಬಂಧಪಟ್ಟವರು ಗಮನ ಹರಿಸಿ ತೆರವುಗೊಳಿಸಬೇಕು ಎಂದು ರೇವಣ್ಣ, ಚಂದ್ರಣ್ಣ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ಪಟ್ಟಣದ ಹೃದಯ ಭಾಗವಾದ ಗ್ರಾಮ ದೇವತಾ ವೃತ್ತದ ಮಳಿಗೆಯ ಮಾಲೀಕರೊಬ್ಬರು ಮುಖ್ಯರಸ್ತೆಯಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಸ್ಥಳೀಯ ಆಡಳಿತ ಮೌನವಹಿಸಿರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಇದೇ ಭಾಗದಲ್ಲಿ ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳನ್ನು ಅಂಗವಿಕಲರು ಅಂಗಲಾಚಿದರೂ ಬಿಡದೆ ಜೆಸಿಬಿ ಬಳಸಿ ಪುರಸಭೆ ಅಧಿಕಾರಿಗಳು ತೆರವು ಮಾಡಿದ್ದರು. ಹಣಬಲವುಳ್ಳ ಮಳಿಗೆ ಮಾಲೀಕರಿಗೆ ಮೂರು ಅಂತಸ್ತಿನ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿದ್ದಾರೆ.</p>.<p>ತುಮಕೂರು- ಮೈಸೂರು ಕಡೆ ಸಂಚರಿಸುವ ವಾಹನಗಳ ಕೇಂದ್ರ ಸ್ಥಾನವಾಗಿರುವ ಗ್ರಾಮದೇವತಾ ವೃತ್ತದಲ್ಲಿ ರಸ್ತೆಗೆ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದರೂ ಮೌನವಹಿಸಿದ್ದಾರೆ.</p>.<p>ಪುರಸಭೆಯಲ್ಲಿ ಬಡವರಿಗೊಂದು ನೀತಿ, ಹಣಬಲವುಳ್ಳವರಿಗೇ ಒಂದು ನೀತಿಯಾಗಿದೆ. ಸಂಬಂಧಪಟ್ಟವರು ಗಮನ ಹರಿಸಿ ತೆರವುಗೊಳಿಸಬೇಕು ಎಂದು ರೇವಣ್ಣ, ಚಂದ್ರಣ್ಣ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>