ಇನ್ನೂ ವಾತಾವರಣ ತಂಪಾಗಿದೆ. ಒಂದೆರಡು ವಾರ ಮಾರುಕಟ್ಟೆಗೆ ಹಣ್ಣು ಬರುವ ಪ್ರಮಾಣ ಕಡಿಮೆ ಇರುತ್ತದೆ. ಬಿಸಿಲಿನ ಪ್ರಮಾಣ ಅಧಿಕವಾದಂತೆ ಹುಣಸೆ ಕಾಯಿ ಬಿಡಿಸಿ, ಹಣ್ಣು ಮಾಡಿಕೊಂಡು ಮಾರುಕಟ್ಟೆಗೆ ತರುವುದು ಹೆಚ್ಚಾಗುತ್ತದೆ. ಸದ್ಯಕ್ಕೆ ಸೋಮವಾರ ಹಾಗೂ ಗುರುವಾರ ಮಾರುಕಟ್ಟೆಯಲ್ಲಿ ಹರಾಜು ನಡೆಯಲಿದೆ. ಹಣ್ಣು ಬರುವುದು ಹೆಚ್ಚಾದರೆ ಹಂಗಾಮು ಮುಗಿಯುವವರೆಗೂ ಪ್ರತಿ ದಿನವೂ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಲಿದೆ ಎಂದು ವರ್ತಕ ಎಚ್.ಪಿ.ದೇವೇಂದ್ರಪ್ಪ ತಿಳಿಸಿದರು.