<p><strong>ಹಾಗಲವಾಡಿ:</strong> ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೀಳು ಗ್ರಾಮದಲ್ಲಿ ಐದು ವರ್ಷಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>25 ಮನೆಗಳು ಇರುವ ದೊಡ್ಡಬೀಳು ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಶಿವಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಗ್ರಾಮದಲ್ಲಿ ಸಿಸ್ಟನ್ ನಿರ್ಮಾಣ ಮಾಡಿ ಐದು ವರ್ಷ ಆಗಿದೆ. ಈವರೆಗೂ ಪೈಪ್ಲೈನ್ ಮಾಡದೇ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.</p>.<p>ಗ್ರಾಮಕ್ಕೆ ಕುಡಿಯಲು ನೀರಿಲ್ಲ, ಗ್ರಾಮದಲ್ಲಿ ಒಂದು ಕೈಪಂಪು ಇದ್ದು ಇದರಲ್ಲಿ ಗಂಟೆಗೆ ಐದಾರು ಬಿಂದಿಗೆ ನೀರು ಬರುತ್ತದೆ. ಮತ್ತೆ ನೀರಿಗಾಗಿ ಒಂದು ಗಂಟೆ ಕಾಯಬೇಕು. ಅಧಿಕಾರಿಗಳು ಶೀಘ್ರ ಸ್ಪಂದಿಸದಿದ್ದರೆ, ಶಿವಪುರ ಗ್ರಾಮ ಪಂಚಾಯಿತಿ<br />ಮುಂದೆ ಧರಣಿ ನಡೆಸಲಾಗುವುದು ಎಂದು ಎಂದು ಗ್ರಾಮಸ್ಥ ರಾಜಣ್ಣ ಎಚ್ಚರಿಸಿದ್ದಾರೆ.</p>.<p>ಶಿವಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಪ್ರತಿಕ್ರಿಯಿಸಿ, ದೊಡ್ಡಬೀಳು ಗ್ರಾಮದ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ರೂಪಿಸಲು ಯೋಜಿಸಲಾಗಿದೆ. ಅಲ್ಲಿಯವರಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತೇವೆ ಎಂದರು.</p>.<p>ಗ್ರಾಮಸ್ಥರಾದ ಗಿರಿಜಮ್ಮ, ಸಿದ್ದಜ್ಜಿ, ರಾಜಮ್ಮ, ಕಲ್ಪನಾ, ರಾಜಪ್ಪ, ಸಿದ್ದರಾಮಕ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಗಲವಾಡಿ:</strong> ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೀಳು ಗ್ರಾಮದಲ್ಲಿ ಐದು ವರ್ಷಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>25 ಮನೆಗಳು ಇರುವ ದೊಡ್ಡಬೀಳು ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಶಿವಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಗ್ರಾಮದಲ್ಲಿ ಸಿಸ್ಟನ್ ನಿರ್ಮಾಣ ಮಾಡಿ ಐದು ವರ್ಷ ಆಗಿದೆ. ಈವರೆಗೂ ಪೈಪ್ಲೈನ್ ಮಾಡದೇ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.</p>.<p>ಗ್ರಾಮಕ್ಕೆ ಕುಡಿಯಲು ನೀರಿಲ್ಲ, ಗ್ರಾಮದಲ್ಲಿ ಒಂದು ಕೈಪಂಪು ಇದ್ದು ಇದರಲ್ಲಿ ಗಂಟೆಗೆ ಐದಾರು ಬಿಂದಿಗೆ ನೀರು ಬರುತ್ತದೆ. ಮತ್ತೆ ನೀರಿಗಾಗಿ ಒಂದು ಗಂಟೆ ಕಾಯಬೇಕು. ಅಧಿಕಾರಿಗಳು ಶೀಘ್ರ ಸ್ಪಂದಿಸದಿದ್ದರೆ, ಶಿವಪುರ ಗ್ರಾಮ ಪಂಚಾಯಿತಿ<br />ಮುಂದೆ ಧರಣಿ ನಡೆಸಲಾಗುವುದು ಎಂದು ಎಂದು ಗ್ರಾಮಸ್ಥ ರಾಜಣ್ಣ ಎಚ್ಚರಿಸಿದ್ದಾರೆ.</p>.<p>ಶಿವಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಪ್ರತಿಕ್ರಿಯಿಸಿ, ದೊಡ್ಡಬೀಳು ಗ್ರಾಮದ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ರೂಪಿಸಲು ಯೋಜಿಸಲಾಗಿದೆ. ಅಲ್ಲಿಯವರಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತೇವೆ ಎಂದರು.</p>.<p>ಗ್ರಾಮಸ್ಥರಾದ ಗಿರಿಜಮ್ಮ, ಸಿದ್ದಜ್ಜಿ, ರಾಜಮ್ಮ, ಕಲ್ಪನಾ, ರಾಜಪ್ಪ, ಸಿದ್ದರಾಮಕ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>