<p><strong>ತಿಪಟೂರು:</strong> ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.</p>.<p>ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದಾಗ ತಾಲ್ಲೂಕು ಆಸ್ಪತ್ರೆಯಲ್ಲಿ ಕೇವಲ ಲಸಿಕೆ ನೀಡುವತ್ತ ಮಾತ್ರ ಗಮನಹರಿಸಿದ್ದು, ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದನ್ನೇ ಮರೆತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ.</p>.<p>ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಮೆಡಿಕಲ್ ತ್ಯಾಜ್ಯ, ಸಾಮಾನ್ಯ ತ್ಯಾಜ್ಯವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಆದರೆ ಹಲವು ದಿನಗಳಿಂದ ಆಸ್ಪತ್ರೆ ಹಿಂಭಾಗದಲ್ಲಿಯೇ ತ್ಯಾಜ್ಯ ಸುಡುತ್ತಿದ್ದಾರೆ. ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿ, ಹ್ಯಾಂಡ್ಗ್ಲೌಸ್ ಸೇರಿದಂತೆ ಮೆಡಿಕಲ್ ತ್ಯಾಜ್ಯವು ಸೇರಿದೆ ಎಂಬ ಗುಮಾನಿ ವ್ಯಕ್ತವಾಗಿದೆ.</p>.<p>ಆರ್ಟಿಪಿಸಿಆರ್ ಘಟಕ ಬಳಿಯಲ್ಲಿನ ರಾಸಯನಿಕ ತ್ಯಾಜ್ಯದ ನೀರು ಸರಬರಾಜಾಗಲು ಪೈಪ್ ಆಳವಡಿಸಲಾಗಿದೆ. ಆದರೆ ಆ ಪೈಪ್ಗಳು ಒಡೆದು ತ್ಯಾಜ್ಯ ಸೋರುತ್ತಿದೆ. ಆ ಸ್ಥಳದಲ್ಲಿ ಪಾಚಿ ಮಾದರಿಯಲ್ಲಿ ನೀರು ಸಂಗ್ರಹವಾಗಿದೆ.</p>.<p class="Subhead">ರಚನೆಯಾಗದ ಆಸ್ಪತ್ರೆ ರಕ್ಷಾ ಸಮಿತಿ: ಸರ್ಕಾರಿ ಆಸ್ಪತ್ರೆಯ ಮೇಲ್ವಿಚಾರಣೆಗೆ ರಚನೆಯಾಗುತ್ತಿದ್ದ ರಕ್ಷಾ ಸಮಿತಿ (ಎಆರ್ಎಸ್ ಸಮಿತಿ) ವಿಸರ್ಜನೆಗೊಂಡು ಮೂರು ವರ್ಷ ಕಳೆದರೂ ಈವರೆಗೂ ಸಮಿತಿ ರಚಿಸಿಲ್ಲ. ಇದರಿಂದಾಗಿ ಆಸ್ಪತ್ರೆಯ ಮೇಲ್ವಿಚಾರಣೆ ಮಾಡುವವರಿಲ್ಲದೆ ಅವ್ಯವಸ್ಥೆಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.</p>.<p>ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದಾಗ ತಾಲ್ಲೂಕು ಆಸ್ಪತ್ರೆಯಲ್ಲಿ ಕೇವಲ ಲಸಿಕೆ ನೀಡುವತ್ತ ಮಾತ್ರ ಗಮನಹರಿಸಿದ್ದು, ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದನ್ನೇ ಮರೆತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ.</p>.<p>ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಮೆಡಿಕಲ್ ತ್ಯಾಜ್ಯ, ಸಾಮಾನ್ಯ ತ್ಯಾಜ್ಯವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಆದರೆ ಹಲವು ದಿನಗಳಿಂದ ಆಸ್ಪತ್ರೆ ಹಿಂಭಾಗದಲ್ಲಿಯೇ ತ್ಯಾಜ್ಯ ಸುಡುತ್ತಿದ್ದಾರೆ. ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿ, ಹ್ಯಾಂಡ್ಗ್ಲೌಸ್ ಸೇರಿದಂತೆ ಮೆಡಿಕಲ್ ತ್ಯಾಜ್ಯವು ಸೇರಿದೆ ಎಂಬ ಗುಮಾನಿ ವ್ಯಕ್ತವಾಗಿದೆ.</p>.<p>ಆರ್ಟಿಪಿಸಿಆರ್ ಘಟಕ ಬಳಿಯಲ್ಲಿನ ರಾಸಯನಿಕ ತ್ಯಾಜ್ಯದ ನೀರು ಸರಬರಾಜಾಗಲು ಪೈಪ್ ಆಳವಡಿಸಲಾಗಿದೆ. ಆದರೆ ಆ ಪೈಪ್ಗಳು ಒಡೆದು ತ್ಯಾಜ್ಯ ಸೋರುತ್ತಿದೆ. ಆ ಸ್ಥಳದಲ್ಲಿ ಪಾಚಿ ಮಾದರಿಯಲ್ಲಿ ನೀರು ಸಂಗ್ರಹವಾಗಿದೆ.</p>.<p class="Subhead">ರಚನೆಯಾಗದ ಆಸ್ಪತ್ರೆ ರಕ್ಷಾ ಸಮಿತಿ: ಸರ್ಕಾರಿ ಆಸ್ಪತ್ರೆಯ ಮೇಲ್ವಿಚಾರಣೆಗೆ ರಚನೆಯಾಗುತ್ತಿದ್ದ ರಕ್ಷಾ ಸಮಿತಿ (ಎಆರ್ಎಸ್ ಸಮಿತಿ) ವಿಸರ್ಜನೆಗೊಂಡು ಮೂರು ವರ್ಷ ಕಳೆದರೂ ಈವರೆಗೂ ಸಮಿತಿ ರಚಿಸಿಲ್ಲ. ಇದರಿಂದಾಗಿ ಆಸ್ಪತ್ರೆಯ ಮೇಲ್ವಿಚಾರಣೆ ಮಾಡುವವರಿಲ್ಲದೆ ಅವ್ಯವಸ್ಥೆಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>