<p><strong>ತಿಪಟೂರು:</strong> ತಾಲ್ಲೂಕಿನ ಸಿಂಗ್ರಿ ನಂಜಪ್ಪ ವೃತ್ತದಲ್ಲಿದ್ದ ಹೈಮಾಸ್ಟ್ ವಿದ್ಯುತ್ ದೀಪ ತೆರವುಗೊಳಿಸಿ, ಅಲ್ಲಿ ರೋಟರಿ ಸಂಸ್ಥೆಯಿಂದ ನೀಡಿರುವ ಗಡಿಯಾರ ಗೋಪುರವನ್ನು ಶುಕ್ರವಾರ ಉದ್ಘಾಟಿಸಲಾಯಿತು.</p>.<p>ಅಂದಾಜು ₹50 ಸಾವಿರ ಮೌಲ್ಯದ ಗಡಿಯಾರ ಗೋಪುರಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಹೈಮಾಸ್ಟ್ ದೀಪ ತೆರವುಗೊಳಿಸಿರುವುದರಿದರಿಂದ ಬೆಳಕಿಗೆ ತೊಂದರೆಯಾಗಿದೆ ಹಾಗೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. </p>.<p>ಈ ಗಡಿಯಾರದಲ್ಲಿ ರೋಮನ್ ಅಂಕಿಯಲ್ಲಿರುವುದರಿಂದ ಎಲ್ಲರಿಗೂ ಅರ್ಥೈಸಿಕೊಳ್ಳಲು ಕಷ್ಟ. ಸಮಯ ನೋಡಲು ಜನರು ಹತ್ತಿರ ಬಂದು ನಿಲ್ಲಬೇಕಿದೆ. ಗೋಪುರದ ವಿನ್ಯಾಸವೂ ಸಮರ್ಥನೀಯವಾಗಿಲ್ಲ.</p>.<p>ಗಡಿಯಾರದಲ್ಲಿ ಕನ್ನಡ ಅಂಕಿ ಇರಬೇಕು. ದೂರದಿಂದ ಸ್ಪಷ್ಟವಾಗಿ ಕಾಣುವಂತೆ ತಿದ್ದುಪಡಿಸಬೇಕು. ಹೈಮಾಸ್ಟ್ ಬೆಳಕಿನ ಸಮಾನ ಪರ್ಯಾಯವನ್ನು ತಕ್ಷಣ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p>‘ಅಭಿವೃದ್ಧಿ ಎಂದರೆ ಕೇವಲ ಕಂಗೊಳಿಸುವ ವಸ್ತು ಅಳವಡಿಸುವುದಲ್ಲ. ಜನರಿಗೆ ಉಪಯುಕ್ತವಾಗುವಂತಿರಬೇಕು. ಜನರ ಹಣದ ಪ್ರಾಮಾಣಿಕ ಬಳಕೆಯಾಗಬೇಕು’ ಎಂದು ರಮೇಶ್ ಟಿ.ಆರ್. ಹೇಳಿದರು.</p>.<p>‘ಕನ್ನಡವನ್ನು ನಿರ್ಲಕ್ಷಿಸಿ ರೋಮನ್ ಲಿಪಿ ಬಳಸಿ ಕನ್ನಡಕ್ಕೆ ಅವಮಾನಿಸಲಾಗಿದೆ. ಶೀಘ್ರ ಜನರಿಗೆ ಅರ್ಥವಾಗುವಂತೆ, ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು’ ಎಂದು ಕಸಾಪ ಕಾರ್ಯದರ್ಶಿ ಮಂಜಪ್ಪ ಒತ್ತಾಯಿಸಿದರು.</p>.<p>‘ಸಮಯ ನೋಡಲು ಜನ ವಾಚ್ ಕಟ್ಟಿರುತ್ತಾರೆ ಅಥವಾ ಮೊಬೈಲ್ನಲ್ಲಿ ಸಮಯ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಬೆಳಕು ಬಹಳ ಮುಖ್ಯ. ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಬೆಳಕು ಮುಖ್ಯ’ ಎನ್ನುತ್ತಾರೆ ಉಜ್ಜಜ್ಜಿ ರಾಜಣ್ಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ತಾಲ್ಲೂಕಿನ ಸಿಂಗ್ರಿ ನಂಜಪ್ಪ ವೃತ್ತದಲ್ಲಿದ್ದ ಹೈಮಾಸ್ಟ್ ವಿದ್ಯುತ್ ದೀಪ ತೆರವುಗೊಳಿಸಿ, ಅಲ್ಲಿ ರೋಟರಿ ಸಂಸ್ಥೆಯಿಂದ ನೀಡಿರುವ ಗಡಿಯಾರ ಗೋಪುರವನ್ನು ಶುಕ್ರವಾರ ಉದ್ಘಾಟಿಸಲಾಯಿತು.</p>.<p>ಅಂದಾಜು ₹50 ಸಾವಿರ ಮೌಲ್ಯದ ಗಡಿಯಾರ ಗೋಪುರಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಹೈಮಾಸ್ಟ್ ದೀಪ ತೆರವುಗೊಳಿಸಿರುವುದರಿದರಿಂದ ಬೆಳಕಿಗೆ ತೊಂದರೆಯಾಗಿದೆ ಹಾಗೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. </p>.<p>ಈ ಗಡಿಯಾರದಲ್ಲಿ ರೋಮನ್ ಅಂಕಿಯಲ್ಲಿರುವುದರಿಂದ ಎಲ್ಲರಿಗೂ ಅರ್ಥೈಸಿಕೊಳ್ಳಲು ಕಷ್ಟ. ಸಮಯ ನೋಡಲು ಜನರು ಹತ್ತಿರ ಬಂದು ನಿಲ್ಲಬೇಕಿದೆ. ಗೋಪುರದ ವಿನ್ಯಾಸವೂ ಸಮರ್ಥನೀಯವಾಗಿಲ್ಲ.</p>.<p>ಗಡಿಯಾರದಲ್ಲಿ ಕನ್ನಡ ಅಂಕಿ ಇರಬೇಕು. ದೂರದಿಂದ ಸ್ಪಷ್ಟವಾಗಿ ಕಾಣುವಂತೆ ತಿದ್ದುಪಡಿಸಬೇಕು. ಹೈಮಾಸ್ಟ್ ಬೆಳಕಿನ ಸಮಾನ ಪರ್ಯಾಯವನ್ನು ತಕ್ಷಣ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p>‘ಅಭಿವೃದ್ಧಿ ಎಂದರೆ ಕೇವಲ ಕಂಗೊಳಿಸುವ ವಸ್ತು ಅಳವಡಿಸುವುದಲ್ಲ. ಜನರಿಗೆ ಉಪಯುಕ್ತವಾಗುವಂತಿರಬೇಕು. ಜನರ ಹಣದ ಪ್ರಾಮಾಣಿಕ ಬಳಕೆಯಾಗಬೇಕು’ ಎಂದು ರಮೇಶ್ ಟಿ.ಆರ್. ಹೇಳಿದರು.</p>.<p>‘ಕನ್ನಡವನ್ನು ನಿರ್ಲಕ್ಷಿಸಿ ರೋಮನ್ ಲಿಪಿ ಬಳಸಿ ಕನ್ನಡಕ್ಕೆ ಅವಮಾನಿಸಲಾಗಿದೆ. ಶೀಘ್ರ ಜನರಿಗೆ ಅರ್ಥವಾಗುವಂತೆ, ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು’ ಎಂದು ಕಸಾಪ ಕಾರ್ಯದರ್ಶಿ ಮಂಜಪ್ಪ ಒತ್ತಾಯಿಸಿದರು.</p>.<p>‘ಸಮಯ ನೋಡಲು ಜನ ವಾಚ್ ಕಟ್ಟಿರುತ್ತಾರೆ ಅಥವಾ ಮೊಬೈಲ್ನಲ್ಲಿ ಸಮಯ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಬೆಳಕು ಬಹಳ ಮುಖ್ಯ. ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಬೆಳಕು ಮುಖ್ಯ’ ಎನ್ನುತ್ತಾರೆ ಉಜ್ಜಜ್ಜಿ ರಾಜಣ್ಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>