<p><strong>ಶಿರಾ</strong>: ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿಸುತ್ತಿದ್ದ ಆರೋಪದ ಮೇಲೆ ಹತ್ತು ಜನರನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.</p>.<p>ಅರಣ್ಯ ಪ್ರದೇಶದಲ್ಲಿ ಡಿ. 6ರಂದು ತಡರಾತ್ರಿ ಗುಂಪೊಂದು ಗುಂಡಿ ತೊಡಿ ಪೂಜಾ ಸಾಮಗ್ರಿ ಹಾಗೂ ಸ್ಪೋಟಕ ಬಳಸಿ ನಿಧಿ ಶೋಧಿಸುತ್ತಿದ್ದಾರೆ ಎಂದು ಬುಕ್ಕಾಪಟ್ಟಣ ಹೋಬಳಿ ಕಂದಾಯ ನಿರೀಕ್ಷಕ ಶ್ರೀನಿವಾಸ್ ತಾವರೆಕೆರೆ ಪೊಲೀಸರಿಗೆ ದೂರುನೀಡಿದ್ದರು.</p>.<p>ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಪೊಲೀಸರು, ರಾಜ್ಯದ ವಿವಿಧ ಭಾಗಗಳ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.ಕೃತ್ಯಕ್ಕೆ ಬಳಸಿದ ಕಾರು, ಮೂರು ಬೈಕ್, ಪೂಜಾ ಸಾಮಗ್ರಿ ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ತಿಪಟೂರು ನಗರದ ವಿಜಯಕುಮಾರ್, ತಿಪಟೂರು ತಾಲ್ಲೂಕಿನ ಜಯಂತಿ ಗ್ರಾಮದ ಗಿರಿಯಪ್ಪ, ಶಿರಾ ತಾಲ್ಲೂಕಿನ ಕಲ್ಲುಕೋಟೆಯ ನಾಗಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಂಜುನಾಥ್, ಮಾಲೂರು ತಾಲ್ಲೂಕಿನ ಭೈರೇನಹಳ್ಳಿ ಗ್ರಾಮದ ಸಂತೋಷ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಕೆ.ಎನ್.ಶ್ರೀನಿವಾಸ್ ಹಾಗೂ ಓಬಳೇಶ್ ರೆಡ್ಡಿ, ಹಾಸನ ಜಿಲ್ಲೆಯ ತಿರುಪತಿಹಳ್ಳಿ ಗ್ರಾಮದ ಕುಮಾರನಾಯ್ಕ, ಬಳ್ಳಾರಿ ಜಿಲ್ಲೆಯ ಉಪ್ಪಿನನಾಯಕನಹಳ್ಳಿ ಗ್ರಾಮದ ಪರಶುರಾಮ, ಶಿವಮೊಗ್ಗ ನಗರದ ದೇವದಾಸ್ ಬಂಧಿತ ಆರೋಪಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ</strong>: ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿಸುತ್ತಿದ್ದ ಆರೋಪದ ಮೇಲೆ ಹತ್ತು ಜನರನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.</p>.<p>ಅರಣ್ಯ ಪ್ರದೇಶದಲ್ಲಿ ಡಿ. 6ರಂದು ತಡರಾತ್ರಿ ಗುಂಪೊಂದು ಗುಂಡಿ ತೊಡಿ ಪೂಜಾ ಸಾಮಗ್ರಿ ಹಾಗೂ ಸ್ಪೋಟಕ ಬಳಸಿ ನಿಧಿ ಶೋಧಿಸುತ್ತಿದ್ದಾರೆ ಎಂದು ಬುಕ್ಕಾಪಟ್ಟಣ ಹೋಬಳಿ ಕಂದಾಯ ನಿರೀಕ್ಷಕ ಶ್ರೀನಿವಾಸ್ ತಾವರೆಕೆರೆ ಪೊಲೀಸರಿಗೆ ದೂರುನೀಡಿದ್ದರು.</p>.<p>ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಪೊಲೀಸರು, ರಾಜ್ಯದ ವಿವಿಧ ಭಾಗಗಳ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.ಕೃತ್ಯಕ್ಕೆ ಬಳಸಿದ ಕಾರು, ಮೂರು ಬೈಕ್, ಪೂಜಾ ಸಾಮಗ್ರಿ ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ತಿಪಟೂರು ನಗರದ ವಿಜಯಕುಮಾರ್, ತಿಪಟೂರು ತಾಲ್ಲೂಕಿನ ಜಯಂತಿ ಗ್ರಾಮದ ಗಿರಿಯಪ್ಪ, ಶಿರಾ ತಾಲ್ಲೂಕಿನ ಕಲ್ಲುಕೋಟೆಯ ನಾಗಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಂಜುನಾಥ್, ಮಾಲೂರು ತಾಲ್ಲೂಕಿನ ಭೈರೇನಹಳ್ಳಿ ಗ್ರಾಮದ ಸಂತೋಷ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಕೆ.ಎನ್.ಶ್ರೀನಿವಾಸ್ ಹಾಗೂ ಓಬಳೇಶ್ ರೆಡ್ಡಿ, ಹಾಸನ ಜಿಲ್ಲೆಯ ತಿರುಪತಿಹಳ್ಳಿ ಗ್ರಾಮದ ಕುಮಾರನಾಯ್ಕ, ಬಳ್ಳಾರಿ ಜಿಲ್ಲೆಯ ಉಪ್ಪಿನನಾಯಕನಹಳ್ಳಿ ಗ್ರಾಮದ ಪರಶುರಾಮ, ಶಿವಮೊಗ್ಗ ನಗರದ ದೇವದಾಸ್ ಬಂಧಿತ ಆರೋಪಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>