<p><strong>ಗುಬ್ಬಿ:</strong> ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಎಚ್ಎಎಲ್ ಘಟಕಕ್ಕೆ ನೀಡಿದ್ದ ಸಂತ್ರಸ್ತರಿಗೆ ಸಮೀಪದಲ್ಲಿದ್ದ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಮರುಮಂಜೂರು ಮಾಡಿಕೊಡಲು ತಾಲ್ಲೂಕು ಆಡಳಿತ ಬುಧವಾರ ಮುಂದಾಯಿತು.</p>.<p>ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ. ಹಾಗೂ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಹದ್ದುಬಸ್ತು ಗುರ್ತಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡರು.</p>.<p>ಮರುಮಂಜೂರಾತಿ ಮಾಡುವ ಜಮೀನಿನಲ್ಲಿ ಈಗಾಗಲೇ ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದ ರೈತರು ತಕರಾರು ಒಡ್ಡಿದರು. ಆದರೆ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಅವರ ಮಾತಿಗೆ ಮನ್ನಣೆ ನೀಡದೆ, ನಿಯಮಾನುಸಾರ ಹದ್ದುಬಸ್ತು ಮಾಡಿದರು.</p>.<p>‘ಸರ್ಕಾರಿ ಜಮೀನನ್ನು ಮಾತ್ರ ಮರು ಮಂಜೂರಾತಿ ಮಾಡಲಾಗುತ್ತಿದೆ. ಹಲವರು ಕಾನೂನುಬಾಹಿರವಾಗಿ ಅನುಭವದಲ್ಲಿದ್ದು, ಯಾವುದೇ ದಾಖಲೆಗಳನ್ನು ಹೊಂದಿಲ್ಲ. ನಾವು ನಿಯಮಾನುಸಾರ ಕ್ರಮ ಕೈಗೊಂಡಿದ್ದೇವೆ. ಯಾವ ರೈತರ ಪರ ಅಥವಾ ವಿರೋಧವಾಗಿ ಅಧಿಕಾರಿಗಳು ಇಲ್ಲ’ ಎಂದು ತಹಶೀಲ್ದಾರ್ ಆರತಿ ಬಿ. ಸ್ಪಷ್ಟಪಡಿಸಿದರು.</p>.<p>‘ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದರೂ ತಾಲ್ಲೂಕು ಆಡಳಿತ ಯಾವುದೇ ಸೂಚನೆ ನೀಡದೆ ಒಮ್ಮೆಲೆ ನಮ್ಮನ್ನು ಒಕ್ಕಲುಬ್ಬಿಸಲು ಬಂದಿದ್ದಾರೆ. ಇದರಿಂದ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅನುಭವದಲ್ಲಿ ಇರುವ ಜಮೀನನ್ನು ಬಿಟ್ಟು ಕೊಡುವುದಿಲ್ಲ. ಈ ವಿಷಯದಲ್ಲಿ ಶಾಸಕರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕಿದೆ’ ಎಂದು ಜಮೀನಿನಲ್ಲಿ ಅನುಭವದಲ್ಲಿದ್ದ ರೈತರು ಹೇಳಿದರು.</p>.<p>‘ಎಲ್ಲರೂ ರೈತರೇ ಆಗಿರುವುದರಿಂದ ಯಾವುದೇ ಕಾನೂನು ಸಂಘರ್ಷಕ್ಕೆ ಅವಕಾಶ ನೀಡಬಾರದು. ಸರ್ಕಾರದ ನಿರ್ದೇಶನದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ’ ಎಂದು ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ತಿಳಿಸಿದರು.</p>.<p>ಗಡಿ ಗುರುತಿಸುವ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು ಎಂಬ ನಿರೀಕ್ಷೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.</p>.<p>ಎಡಿಎಲ್ಆರ್ ತಿಮ್ಮಯ್ಯ, ಪೊಲೀಸ್ ಇನ್ಸ್ಪೆಕ್ಟರ್ ಗೋಪಿನಾಥ್, ಪಿಎಸ್ಐ ಸುನಿಲ್ ಕುಮಾರ್, ಶಿವಕುಮಾರ್, ಪೊಲೀಸ್ ಸಿಬ್ಬಂದಿ, ಕಂದಾಯ ನಿರೀಕ್ಷಕ ಮೋಹನ್, ತಾಲ್ಲೂಕು ಸರ್ವೆಯರ್ ನಿಜಗುಣಪ್ಪ, ಸರ್ವೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಎಚ್ಎಎಲ್ ಘಟಕಕ್ಕೆ ನೀಡಿದ್ದ ಸಂತ್ರಸ್ತರಿಗೆ ಸಮೀಪದಲ್ಲಿದ್ದ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಮರುಮಂಜೂರು ಮಾಡಿಕೊಡಲು ತಾಲ್ಲೂಕು ಆಡಳಿತ ಬುಧವಾರ ಮುಂದಾಯಿತು.</p>.<p>ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ. ಹಾಗೂ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಹದ್ದುಬಸ್ತು ಗುರ್ತಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡರು.</p>.<p>ಮರುಮಂಜೂರಾತಿ ಮಾಡುವ ಜಮೀನಿನಲ್ಲಿ ಈಗಾಗಲೇ ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದ ರೈತರು ತಕರಾರು ಒಡ್ಡಿದರು. ಆದರೆ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಅವರ ಮಾತಿಗೆ ಮನ್ನಣೆ ನೀಡದೆ, ನಿಯಮಾನುಸಾರ ಹದ್ದುಬಸ್ತು ಮಾಡಿದರು.</p>.<p>‘ಸರ್ಕಾರಿ ಜಮೀನನ್ನು ಮಾತ್ರ ಮರು ಮಂಜೂರಾತಿ ಮಾಡಲಾಗುತ್ತಿದೆ. ಹಲವರು ಕಾನೂನುಬಾಹಿರವಾಗಿ ಅನುಭವದಲ್ಲಿದ್ದು, ಯಾವುದೇ ದಾಖಲೆಗಳನ್ನು ಹೊಂದಿಲ್ಲ. ನಾವು ನಿಯಮಾನುಸಾರ ಕ್ರಮ ಕೈಗೊಂಡಿದ್ದೇವೆ. ಯಾವ ರೈತರ ಪರ ಅಥವಾ ವಿರೋಧವಾಗಿ ಅಧಿಕಾರಿಗಳು ಇಲ್ಲ’ ಎಂದು ತಹಶೀಲ್ದಾರ್ ಆರತಿ ಬಿ. ಸ್ಪಷ್ಟಪಡಿಸಿದರು.</p>.<p>‘ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದರೂ ತಾಲ್ಲೂಕು ಆಡಳಿತ ಯಾವುದೇ ಸೂಚನೆ ನೀಡದೆ ಒಮ್ಮೆಲೆ ನಮ್ಮನ್ನು ಒಕ್ಕಲುಬ್ಬಿಸಲು ಬಂದಿದ್ದಾರೆ. ಇದರಿಂದ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅನುಭವದಲ್ಲಿ ಇರುವ ಜಮೀನನ್ನು ಬಿಟ್ಟು ಕೊಡುವುದಿಲ್ಲ. ಈ ವಿಷಯದಲ್ಲಿ ಶಾಸಕರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕಿದೆ’ ಎಂದು ಜಮೀನಿನಲ್ಲಿ ಅನುಭವದಲ್ಲಿದ್ದ ರೈತರು ಹೇಳಿದರು.</p>.<p>‘ಎಲ್ಲರೂ ರೈತರೇ ಆಗಿರುವುದರಿಂದ ಯಾವುದೇ ಕಾನೂನು ಸಂಘರ್ಷಕ್ಕೆ ಅವಕಾಶ ನೀಡಬಾರದು. ಸರ್ಕಾರದ ನಿರ್ದೇಶನದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ’ ಎಂದು ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ತಿಳಿಸಿದರು.</p>.<p>ಗಡಿ ಗುರುತಿಸುವ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು ಎಂಬ ನಿರೀಕ್ಷೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.</p>.<p>ಎಡಿಎಲ್ಆರ್ ತಿಮ್ಮಯ್ಯ, ಪೊಲೀಸ್ ಇನ್ಸ್ಪೆಕ್ಟರ್ ಗೋಪಿನಾಥ್, ಪಿಎಸ್ಐ ಸುನಿಲ್ ಕುಮಾರ್, ಶಿವಕುಮಾರ್, ಪೊಲೀಸ್ ಸಿಬ್ಬಂದಿ, ಕಂದಾಯ ನಿರೀಕ್ಷಕ ಮೋಹನ್, ತಾಲ್ಲೂಕು ಸರ್ವೆಯರ್ ನಿಜಗುಣಪ್ಪ, ಸರ್ವೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>