<p><strong>ತುಮಕೂರು:</strong> ತರಕಾರಿ, ಸೊಪ್ಪಿನ ಬೆಲೆ ತುಸು ಏರಿಕೆಯತ್ತ ಮುಖ ಮಾಡಿದ್ದರೆ, ಸೇಬು ಹಣ್ಣು ಇಳಿಕೆಯಾಗಿದ್ದು, ಏಲಕ್ಕಿ ಬಾಳೆಹಣ್ಣು ಮತ್ತಷ್ಟು ದುಬಾರಿಯಾಗಿದೆ. ಕೋಳಿ ಮಾಂಸ, ಮೀನಿನ ದರ ತಗ್ಗಿದೆ.</p>.<p>ಟೊಮೆಟೊ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿವೆ. ಬೀನ್ಸ್, ಕ್ಯಾರೇಟ್ ಬೆಲೆ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ. ಮೂಲಂಗಿ ದುಪ್ಪಟ್ಟಾಗಿದ್ದು, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ಸೌತೆಕಾಯಿ, ನಿಂಬೆಹಣ್ಣು ಏರಿಕೆಯಾಗಿದೆ. ಗಡ್ಡೆಕೋಸು, ತೊಂಡೆಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತಷ್ಟು ಅಗ್ಗವಾಗಿದೆ. ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ.</p>.<p><strong>ಸೊಪ್ಪು ಚೇತರಿಕೆ:</strong> ಸೊಪ್ಪು ದರ ಎರಡು ವಾರದಿಂದ ಅಲ್ಪ ಪ್ರಮಾಣದಲ್ಲಿ ಚೇತರಿಕೆಯತ್ತ ಸಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹20–30, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.</p>.<p><strong>ಸೇಬು ಇಳಿಕೆ:</strong> ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಸೇಬು ಹಣ್ಣು ಧಾರಣೆ ಇಳಿಕೆಯಾಗಿದೆ. ಮೂಸಂಬಿ, ಪೈನಾಪಲ್, ಸೀಬೆ, ಡ್ರ್ಯಾಗನ್ ಫ್ರೂಟ್ ಕಡಿಮೆಯಾಗಿದೆ. ಆದರೆ ಏಲಕ್ಕಿ ಬಾಳೆಹಣ್ಣು ₹100ರ ಗಡಿ ದಾಟಿದ್ದು, ಶ್ರಾವಣ ಮುಗಿಯುವವರೆಗೂ ಇದೇ ಬೆಲೆ ಮುಂದುವರಿಯಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹144–146, ಪಾಮಾಯಿಲ್ ಕೆ.ಜಿ ₹114–115, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ ಧಾನ್ಯ:</strong> ಆಷಾಢ ಮಾಸದಲ್ಲಿ ಅಲ್ಪ ಕಡಿಮೆಯಾಗಿದ್ದ ಬೇಳೆ, ಧಾನ್ಯ ಧಾರಣೆ ಶ್ರಾವಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಉಳಿದಂತೆ ಹೆಚ್ಚಿನ ವ್ಯತ್ಯಾಸವಾಗಿಲ್ಲ.</p>.<p><strong>ಮಸಾಲೆ ಪದಾರ್ಥ:</strong> ಒಣ ಹಣ್ಣುಗಳು ಗಗನಮುಖಿಯಾಗಿದ್ದು, ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಮಸಾಲೆ ಪದಾರ್ಥಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹150–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,600, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹760–800, ಗೋಡಂಬಿ ಕೆ.ಜಿ ₹750–950, ಒಣದ್ರಾಕ್ಷಿ ಕೆ.ಜಿ ₹480–500ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಇಳಿಕೆ:</strong> ಶ್ರಾವಣ ಮಾಸದಲ್ಲಿ ಸಾಕಷ್ಟು ಮಂದಿ ಮಾಂಸಾಹಾರ ಸೇವಿಸುವುದಿಲ್ಲ. ಹಾಗಾಗಿ ಕೋಳಿ ಮಾಂಸದ ಬೆಲೆ ಕಡಿಮೆಯಾಗುತ್ತಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹170, ಸ್ಕಿನ್ಲೆಸ್ ಕೆ.ಜಿ ₹190ಕ್ಕೆ ಇಳಿದಿದೆ. ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಏರಿಕೆಯಾಗಿದೆ.</p>.<p><strong>ಮೀನು:</strong> ಮೀನಿನ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಏರಿಳಿತವಾಗಿದೆ. ಬೂತಾಯಿ ₹380, ಬೊಳಿಂಜರ್ ₹220, ಅಂಜಲ್ ಕೆ.ಜಿ ₹1,230, ಬಿಳಿಮಾಂಜಿ ಕೆ.ಜಿ 1,250, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹500–680, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತರಕಾರಿ, ಸೊಪ್ಪಿನ ಬೆಲೆ ತುಸು ಏರಿಕೆಯತ್ತ ಮುಖ ಮಾಡಿದ್ದರೆ, ಸೇಬು ಹಣ್ಣು ಇಳಿಕೆಯಾಗಿದ್ದು, ಏಲಕ್ಕಿ ಬಾಳೆಹಣ್ಣು ಮತ್ತಷ್ಟು ದುಬಾರಿಯಾಗಿದೆ. ಕೋಳಿ ಮಾಂಸ, ಮೀನಿನ ದರ ತಗ್ಗಿದೆ.</p>.<p>ಟೊಮೆಟೊ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿವೆ. ಬೀನ್ಸ್, ಕ್ಯಾರೇಟ್ ಬೆಲೆ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ. ಮೂಲಂಗಿ ದುಪ್ಪಟ್ಟಾಗಿದ್ದು, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ಸೌತೆಕಾಯಿ, ನಿಂಬೆಹಣ್ಣು ಏರಿಕೆಯಾಗಿದೆ. ಗಡ್ಡೆಕೋಸು, ತೊಂಡೆಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತಷ್ಟು ಅಗ್ಗವಾಗಿದೆ. ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ.</p>.<p><strong>ಸೊಪ್ಪು ಚೇತರಿಕೆ:</strong> ಸೊಪ್ಪು ದರ ಎರಡು ವಾರದಿಂದ ಅಲ್ಪ ಪ್ರಮಾಣದಲ್ಲಿ ಚೇತರಿಕೆಯತ್ತ ಸಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹20–30, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.</p>.<p><strong>ಸೇಬು ಇಳಿಕೆ:</strong> ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಸೇಬು ಹಣ್ಣು ಧಾರಣೆ ಇಳಿಕೆಯಾಗಿದೆ. ಮೂಸಂಬಿ, ಪೈನಾಪಲ್, ಸೀಬೆ, ಡ್ರ್ಯಾಗನ್ ಫ್ರೂಟ್ ಕಡಿಮೆಯಾಗಿದೆ. ಆದರೆ ಏಲಕ್ಕಿ ಬಾಳೆಹಣ್ಣು ₹100ರ ಗಡಿ ದಾಟಿದ್ದು, ಶ್ರಾವಣ ಮುಗಿಯುವವರೆಗೂ ಇದೇ ಬೆಲೆ ಮುಂದುವರಿಯಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹144–146, ಪಾಮಾಯಿಲ್ ಕೆ.ಜಿ ₹114–115, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ ಧಾನ್ಯ:</strong> ಆಷಾಢ ಮಾಸದಲ್ಲಿ ಅಲ್ಪ ಕಡಿಮೆಯಾಗಿದ್ದ ಬೇಳೆ, ಧಾನ್ಯ ಧಾರಣೆ ಶ್ರಾವಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಉಳಿದಂತೆ ಹೆಚ್ಚಿನ ವ್ಯತ್ಯಾಸವಾಗಿಲ್ಲ.</p>.<p><strong>ಮಸಾಲೆ ಪದಾರ್ಥ:</strong> ಒಣ ಹಣ್ಣುಗಳು ಗಗನಮುಖಿಯಾಗಿದ್ದು, ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಮಸಾಲೆ ಪದಾರ್ಥಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹150–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,600, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹760–800, ಗೋಡಂಬಿ ಕೆ.ಜಿ ₹750–950, ಒಣದ್ರಾಕ್ಷಿ ಕೆ.ಜಿ ₹480–500ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಇಳಿಕೆ:</strong> ಶ್ರಾವಣ ಮಾಸದಲ್ಲಿ ಸಾಕಷ್ಟು ಮಂದಿ ಮಾಂಸಾಹಾರ ಸೇವಿಸುವುದಿಲ್ಲ. ಹಾಗಾಗಿ ಕೋಳಿ ಮಾಂಸದ ಬೆಲೆ ಕಡಿಮೆಯಾಗುತ್ತಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹170, ಸ್ಕಿನ್ಲೆಸ್ ಕೆ.ಜಿ ₹190ಕ್ಕೆ ಇಳಿದಿದೆ. ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಏರಿಕೆಯಾಗಿದೆ.</p>.<p><strong>ಮೀನು:</strong> ಮೀನಿನ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಏರಿಳಿತವಾಗಿದೆ. ಬೂತಾಯಿ ₹380, ಬೊಳಿಂಜರ್ ₹220, ಅಂಜಲ್ ಕೆ.ಜಿ ₹1,230, ಬಿಳಿಮಾಂಜಿ ಕೆ.ಜಿ 1,250, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹500–680, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>