ಶಂಕರಯ್ಯ ಮತ್ತು ರವೀಶ್ ದಾಯಾದಿಗಳಾಗಿದ್ದಾರೆ. ಇಬ್ಬರ ನಡುವೆ ನಿವೇಶನದ ವಿಚಾರವಾಗಿ ಹಲವು ಬಾರಿ ಗಲಾಟೆಯೂ ನಡೆದಿತ್ತು. ಶಂಕರಯ್ಯ ಪೊಲೀಸರಿಗೆ ದೂರು ನೀಡಿದ್ದರು. ಶಂಕರಯ್ಯ ಮೇ 13ರಂದು ತುರುವೇಕೆರೆ ಪಟ್ಟಣದಿಂದ ಕೆಲಸ ಮುಗಿಸಿಕೊಂಡು ಟಿವಿಎಸ್ನಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಮಲ್ಲಾಘಟ್ಟದ ಕೆರೆ ಏರಿ ಹಿಂಭಾಗ ಅಡ್ಡಗಟ್ಟಿ ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಸಿಪಿಐ ಲೋಕೇಶ್ ಮತ್ತು ಪಿಎಸ್ಐ ಪ್ರೀತಮ್ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.