<p><strong>ತುರುವೇಕೆರೆ</strong>: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಸ್ವರ್ಣ ಗೌರಿ ದೇವಾಲಯ ಸಮಿತಿಯಿಂದ ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನೆರವೇರಿತು.</p>.<p>ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಮ್ಮಗೆ ವಿವಿಧ ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯ ಜರುಗಿದವು. ಶನಿವಾರ ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಸಂಪಿಗೆ ಕೆರೆಯಲ್ಲಿ ಗಂಗಾಪೂಜೆ ನಡೆಯಿತು. ರಾತ್ರಿ ಶಕ್ತಿಗಣಪತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<p>ಭಾನುವಾರ ಬೆಳಗ್ಗೆ ಪೂರ್ಣಾಹುತಿ, ಮಂಗಳಾರತಿ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಭಾನುವಾರ ರಾತ್ರಿ 8 ಗಂಟೆಗೆ ಮಂಜು ಅವರಿಂದ ನೃತ್ಯ ನಡೆಯಿತು. ರಾತ್ರಿ ಕೀಲುಕುದುರೆ ನರ್ತನ, ಭದ್ರಕಾಳಿ ಸಮೇತ ಲಿಂಗದಬೀರರ ಕುಣಿತ, ಸಿಡಿಮದ್ದಿನ ಪ್ರದರ್ಶನ ನಡೆಯಿತು.</p>.<p>ಸೋಮವಾರ ಬೆಳಗ್ಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮಾಡಿ ಸಂಪಿಗೆ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. </p>.<p>ಸಮಿತಿ ಕಾರ್ಯದರ್ಶಿ ಷಣ್ಮುಖ, ಸದಸ್ಯ ಸಂಗಮೇಶ್, ನಿರಂಜನ್, ಎಸ್.ಆರ್.ಲೋಹಿತ್, ಎಸ್.ಜಿ.ವಿಜಯಕುಮಾರ್, ಕಾರ್ತಿಕ್ ಪಟೇಲ್, ಎಸ್.ಡಿ.ವಿನಯ್, ಎಸ್.ಆರ್.ವಿಜಯಕುಮಾರ್, ಮಂಜು, ಎಸ್.ಆರ್.ಮಂಜು, ಫುಡ್ ಮಂಜು, ಗಂಗಾಧರಮೂರ್ತಿ, ಎಸ್.ಕೆ.ದಿಲೀಪ್, ಅರ್ಚಕ ಪ್ರಸನ್ನ, ಮಂಜುನಾಥ್, ಗೌರಿ ಮಠದ ವಿಶ್ವಾರಾಧರ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ</strong>: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಸ್ವರ್ಣ ಗೌರಿ ದೇವಾಲಯ ಸಮಿತಿಯಿಂದ ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನೆರವೇರಿತು.</p>.<p>ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಮ್ಮಗೆ ವಿವಿಧ ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯ ಜರುಗಿದವು. ಶನಿವಾರ ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಸಂಪಿಗೆ ಕೆರೆಯಲ್ಲಿ ಗಂಗಾಪೂಜೆ ನಡೆಯಿತು. ರಾತ್ರಿ ಶಕ್ತಿಗಣಪತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<p>ಭಾನುವಾರ ಬೆಳಗ್ಗೆ ಪೂರ್ಣಾಹುತಿ, ಮಂಗಳಾರತಿ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಭಾನುವಾರ ರಾತ್ರಿ 8 ಗಂಟೆಗೆ ಮಂಜು ಅವರಿಂದ ನೃತ್ಯ ನಡೆಯಿತು. ರಾತ್ರಿ ಕೀಲುಕುದುರೆ ನರ್ತನ, ಭದ್ರಕಾಳಿ ಸಮೇತ ಲಿಂಗದಬೀರರ ಕುಣಿತ, ಸಿಡಿಮದ್ದಿನ ಪ್ರದರ್ಶನ ನಡೆಯಿತು.</p>.<p>ಸೋಮವಾರ ಬೆಳಗ್ಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮಾಡಿ ಸಂಪಿಗೆ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. </p>.<p>ಸಮಿತಿ ಕಾರ್ಯದರ್ಶಿ ಷಣ್ಮುಖ, ಸದಸ್ಯ ಸಂಗಮೇಶ್, ನಿರಂಜನ್, ಎಸ್.ಆರ್.ಲೋಹಿತ್, ಎಸ್.ಜಿ.ವಿಜಯಕುಮಾರ್, ಕಾರ್ತಿಕ್ ಪಟೇಲ್, ಎಸ್.ಡಿ.ವಿನಯ್, ಎಸ್.ಆರ್.ವಿಜಯಕುಮಾರ್, ಮಂಜು, ಎಸ್.ಆರ್.ಮಂಜು, ಫುಡ್ ಮಂಜು, ಗಂಗಾಧರಮೂರ್ತಿ, ಎಸ್.ಕೆ.ದಿಲೀಪ್, ಅರ್ಚಕ ಪ್ರಸನ್ನ, ಮಂಜುನಾಥ್, ಗೌರಿ ಮಠದ ವಿಶ್ವಾರಾಧರ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>