<p><strong>ತುರುವೇಕೆರೆ</strong>: ಮೈಸೂರು– ಚಿತ್ರದುರ್ಗದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಳ್ಳುವೆ ಎಂದು ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೊಂಡಜ್ಜಿ ವಿಶ್ವನಾಥ್ ಹೇಳಿದರು.</p>.<p>ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೊಂಡಜ್ಜಿ ವಿಶ್ವನಾಥ್ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತುರುವೇಕೆರೆ ತಾಲ್ಲೂಕಿನ ಸಂಪಿಗೆ, ಅಮ್ಮಸಂದ್ರ ಮತ್ತು ಬಾಣಸಂದ್ರದ ಮೂಲಕ ಹಲವಾರು ರೈಲುಗಳು ಸಂಚಾರ ಮಾಡುತ್ತಿವೆ. ರೈಲ್ವೆ ಪ್ರಯಾಣಿಕರು ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಈ ಪ್ರದೇಶಗಳಲ್ಲಿ ಆಗಬೇಕೆಂದು ತಿಳಿಸಿದ್ದಾರೆ. ಮೈಸೂರು– ಚಿತ್ರದುರ್ಗ ರೈಲ್ವೆ ಮಾರ್ಗವನ್ನು ಸಿದ್ದಪಡಿಸಬೇಕೆಂಬುದೂ ಜನರ ಆಗ್ರಹವಿದೆ ಎಂದರು.</p>.<p>ಡಾ.ಚೌದ್ರಿ ನಾಗೇಶ್, ಪುಟ್ಟರಂಗಪ್ಪ, ಹಾಲೇಗೌಡ, ಕೆ.ಎಸ್. ಜವರಪ್ಪ (ಪುಟ್ಟಣ್ಣ), ಕೆ.ಜೆ.ಲೋಕೇಶ್, ಡಿ.ಎಸ್.ಸುದರ್ಶನ್, ಡಿ.ಕೆ.ರತೀಶ್, ಸಿ.ಟಿ.ತಿಮ್ಮಪ್ಪ, ಕಂಚಿಗನಾಯ್ಕ, ಬಿ.ಸಿ.ಚೇತನ, ಕೆ.ಎಸ್.ಕುಮಾರ್, ಪಟೇಲ್ ಚಂದ್ರಶೇಖರ್, ಕೆ.ಎಸ್.ರಾಜಶೇಖರ್, ಗಿರೀಶ್, ರಾಮೇಗೌಡ, ನವೀನ್ ಕುಮಾರ್, ಜಯರಾಮ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ</strong>: ಮೈಸೂರು– ಚಿತ್ರದುರ್ಗದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಳ್ಳುವೆ ಎಂದು ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೊಂಡಜ್ಜಿ ವಿಶ್ವನಾಥ್ ಹೇಳಿದರು.</p>.<p>ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೊಂಡಜ್ಜಿ ವಿಶ್ವನಾಥ್ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತುರುವೇಕೆರೆ ತಾಲ್ಲೂಕಿನ ಸಂಪಿಗೆ, ಅಮ್ಮಸಂದ್ರ ಮತ್ತು ಬಾಣಸಂದ್ರದ ಮೂಲಕ ಹಲವಾರು ರೈಲುಗಳು ಸಂಚಾರ ಮಾಡುತ್ತಿವೆ. ರೈಲ್ವೆ ಪ್ರಯಾಣಿಕರು ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಈ ಪ್ರದೇಶಗಳಲ್ಲಿ ಆಗಬೇಕೆಂದು ತಿಳಿಸಿದ್ದಾರೆ. ಮೈಸೂರು– ಚಿತ್ರದುರ್ಗ ರೈಲ್ವೆ ಮಾರ್ಗವನ್ನು ಸಿದ್ದಪಡಿಸಬೇಕೆಂಬುದೂ ಜನರ ಆಗ್ರಹವಿದೆ ಎಂದರು.</p>.<p>ಡಾ.ಚೌದ್ರಿ ನಾಗೇಶ್, ಪುಟ್ಟರಂಗಪ್ಪ, ಹಾಲೇಗೌಡ, ಕೆ.ಎಸ್. ಜವರಪ್ಪ (ಪುಟ್ಟಣ್ಣ), ಕೆ.ಜೆ.ಲೋಕೇಶ್, ಡಿ.ಎಸ್.ಸುದರ್ಶನ್, ಡಿ.ಕೆ.ರತೀಶ್, ಸಿ.ಟಿ.ತಿಮ್ಮಪ್ಪ, ಕಂಚಿಗನಾಯ್ಕ, ಬಿ.ಸಿ.ಚೇತನ, ಕೆ.ಎಸ್.ಕುಮಾರ್, ಪಟೇಲ್ ಚಂದ್ರಶೇಖರ್, ಕೆ.ಎಸ್.ರಾಜಶೇಖರ್, ಗಿರೀಶ್, ರಾಮೇಗೌಡ, ನವೀನ್ ಕುಮಾರ್, ಜಯರಾಮ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>