ಎರಡನೇ ಪ್ರಕರಣದಲ್ಲಿ ಮೃತಪಟ್ಟವರು ಕೊಪ್ಪ ಗ್ರಾಮದ ಗಂಗಭೈರಯ್ಯ (45). ಮಾಗಡಿಪಾಳ್ಯ ಕ್ರಾಸ್ನಲ್ಲಿ ರಮೇಶ್ ಮತ್ತು ಗಂಗಭೈರಯ್ಯ ನಿಂತಿದ್ದು, ಹಾಸನ ಕಡೆಯಿಂದ ಬಂದ ಕಾರು ಗಂಗಭೈರಯ್ಯ ಅವರಿಗೆ ಡಿಕ್ಕಿ ಹೊಡೆದಿದೆ. ಚಿಕಿತ್ಸೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.