ತುಮಕೂರು: ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಎಂ.ರೇವಣ ಸಿದ್ದಪ್ಪ ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಧುಗಿರಿ ತಾಲ್ಲೂಕಿನ ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಸಿ.ಮಂಜುನಾಥ್ ಮತ್ತು ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಟಿ.ಎಸ್.ಸಿದ್ದೇಶ್ವರ್ ಅಮಾನತುಗೊಂಡ ಶಿಕ್ಷಕರು.
ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಿ.ಮಂಜುನಾಥ್ ಅವರು 2018ರಿಂದ 2022ರ ಅವಧಿಯಲ್ಲಿ 74 ದಿನಗಳ ಕಾಲ ಪದೇ ಪದೇ ಗೈರು ಹಾಜರಾಗಿದ್ದರು.
ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಟಿ.ಎಸ್.ಸಿದ್ದೇಶ್ವರ್ 2022 ಮೇ 17ರಿಂದ ಇಲ್ಲಿಯವರೆಗೂ ನಿರಂತರವಾಗಿ ಗೈರುಹಾಜರಾಗಿದ್ದಾರೆ.