<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣಕ್ಕೆ ಸೋಮವಾರ ಆಗಮಿಸಿದ ಆಯೋಧ್ಯೆಗೆ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ವಿಜೃಂಭಣೆಯ ಸ್ವಾಗತ ನೀಡಲಾಯಿತು.</p>.<p>ಪಟ್ಟಣದ ಪಂಚಮುಖಿ ಆಂಜನೇಯ ದೇವಾಲಯ ಬಳಿಗೆ ಬೆಳಿಗ್ಗೆ 11ಕ್ಕೆ ಆಗಮಿಸಿದ ಮಂತ್ರಾಕ್ಷತೆ ಕಳಶವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಎತ್ತಿನಗಾಡಿಯಲ್ಲಿ ಮಂತ್ರಾಕ್ಷತೆ ಕಳಶವಿರಿಸಿ ಪೂಜೆ ಸಲ್ಲಿಸಲಾಯಿತು.</p>.<p>ಮಂಗಳವಾದ್ಯ, ಸೋಮನ ಕುಣಿತ, ಗಂಗೆಯ ಕಳಶಹೊತ್ತ ಕುವರಿಯರ ತಂಡ, ಶ್ರೀರಾಮ ಹಾಗೂ ಹನುಮ ವೇಶಧಾರಿಗಳ ತಂಡದೊಂದಿಗೆ ಶೋಭಾಯಾತ್ರೆ ನೆಹರೂ ವೃತ್ತದಿಂದ ಖಾಸಗಿ ಬಸ್ನಿಲ್ದಾಣ, ಅರಳೆಪೇಟೆ ಮೂಲಕ ಹಳೆಯೂರು ಆಂಜನೇಯ ದೇವಾಲಯದವರೆಗೆ ಸಾಗಿತು. ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕಾಗಿ ಕಳಶವನ್ನಿರಿಸಲಾಯಿತು.</p>.<p>ರಾಕೇಶ್ಅಣೆಕಟ್ಟೆ, ಹರ್ಷ, ಸುಧೀಂದ್ರ, ಎಂ. ಬನಶಂಕರಯ್ಯ, ಲಕ್ಷ್ಮಿಕಾಂತ್, ವೇದಮೂರ್ತಿ, ಶ್ರೀನಿವಾಸಮೂರ್ತಿ, ಮಿಲಿಟರಿ ಶಿವಣ್ಣ, ಮೇರುನಾಥ್, ಹುಳಿಯಾರಿನ ಬಸವಯ್ಯ, ಶ್ರೀಧರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣಕ್ಕೆ ಸೋಮವಾರ ಆಗಮಿಸಿದ ಆಯೋಧ್ಯೆಗೆ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ವಿಜೃಂಭಣೆಯ ಸ್ವಾಗತ ನೀಡಲಾಯಿತು.</p>.<p>ಪಟ್ಟಣದ ಪಂಚಮುಖಿ ಆಂಜನೇಯ ದೇವಾಲಯ ಬಳಿಗೆ ಬೆಳಿಗ್ಗೆ 11ಕ್ಕೆ ಆಗಮಿಸಿದ ಮಂತ್ರಾಕ್ಷತೆ ಕಳಶವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಎತ್ತಿನಗಾಡಿಯಲ್ಲಿ ಮಂತ್ರಾಕ್ಷತೆ ಕಳಶವಿರಿಸಿ ಪೂಜೆ ಸಲ್ಲಿಸಲಾಯಿತು.</p>.<p>ಮಂಗಳವಾದ್ಯ, ಸೋಮನ ಕುಣಿತ, ಗಂಗೆಯ ಕಳಶಹೊತ್ತ ಕುವರಿಯರ ತಂಡ, ಶ್ರೀರಾಮ ಹಾಗೂ ಹನುಮ ವೇಶಧಾರಿಗಳ ತಂಡದೊಂದಿಗೆ ಶೋಭಾಯಾತ್ರೆ ನೆಹರೂ ವೃತ್ತದಿಂದ ಖಾಸಗಿ ಬಸ್ನಿಲ್ದಾಣ, ಅರಳೆಪೇಟೆ ಮೂಲಕ ಹಳೆಯೂರು ಆಂಜನೇಯ ದೇವಾಲಯದವರೆಗೆ ಸಾಗಿತು. ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕಾಗಿ ಕಳಶವನ್ನಿರಿಸಲಾಯಿತು.</p>.<p>ರಾಕೇಶ್ಅಣೆಕಟ್ಟೆ, ಹರ್ಷ, ಸುಧೀಂದ್ರ, ಎಂ. ಬನಶಂಕರಯ್ಯ, ಲಕ್ಷ್ಮಿಕಾಂತ್, ವೇದಮೂರ್ತಿ, ಶ್ರೀನಿವಾಸಮೂರ್ತಿ, ಮಿಲಿಟರಿ ಶಿವಣ್ಣ, ಮೇರುನಾಥ್, ಹುಳಿಯಾರಿನ ಬಸವಯ್ಯ, ಶ್ರೀಧರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>