ತುಮಕೂರು: ನಗರದ ಶಿರಾ ಗೇಟ್ ಬಳಿ ಗುರುವಾರ ರಾತ್ರಿ ಟಿಪ್ಪರ್ ಲಾರಿ ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಚಾಲಕಿ ರತ್ನಮ್ಮ (55) ಎಂಬುವರು ಮೃತಪಟ್ಟಿದ್ದಾರೆ.
ಶಿರಾ ಗೇಟ್ ಹತ್ತಿರದ ಅರಳಿಮರಪಾಳ್ಯದ ನಿವಾಸಿ. ನಗರದಿಂದ ಮನೆಯ ಕಡೆಗೆ ಹೋಗುವಾಗ ಬೈಕ್ ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿದೆ. ನೆಲಕ್ಕುರುಳಿದ ರತ್ನಮ್ಮ ದೇಹದ ಮೇಲೆ ಟಿಪ್ಪರ್ ಚಕ್ರ ಹತ್ತಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.