ಈ ಬಗ್ಗೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕರು, ತಾಯಿ ಮಗುವನ್ನು ತುರ್ತು ವಾಹನದಲ್ಲಿ ಕರೆದೊಯ್ಯಲು ಹಣ ಪಡೆಯುವಂತಿಲ್ಲ. ಆದರೆ ತುಮಕೂರು, ಬೆಂಗಳೂರಿಗೆ ರೋಗಿಯನ್ನು ಕರೆದೊಯ್ಯಲು ಕಿ.ಮೀಗೆ ಇಂತಿಷ್ಟು ಎಂದು ಇಲಾಖೆ ನಿಗದಿಪಡಿಸಿದ ಮೊತ್ತ ಪಡೆಯಬಹುದು. ಆದರೆ, ಪಡೆದ ಹಣಕ್ಕೆ ರಶೀದಿ ನೀಡಬೇಕು. ಬಡ ಜನತೆಗೆ ಉಚಿತವಾಗಿ ತುರ್ತು ವಾಹನ ಕಳುಹಿಸಿಕೊಡುವ ನಿರ್ಧಾರವನ್ನು ವೈದ್ಯಾಧಿಕಾರಿ ತೆಗೆದುಕೊಳ್ಳಬಹುದು ಎಂದರು.