‘ಮಧುಮೇಹ ನಿಯಂತ್ರಿಸಲು ಶಿಸ್ತು ಬದ್ಧ ಜೀವನ ಶೈಲಿ ಮುಖ್ಯ, ಕಡಿಮೆ ಸಕ್ಕರೆ– ಕಡಿಮೆ ಅಪಾಯ, ದಪ್ಪನೆಯ ದೇಹ ಸಕ್ಕರೆಯ ಸ್ನೇಹ, ಮಧುಮೇಹ ಯಾರಿಗಾದರೂ ಬರಬಹುದು ಮುನ್ನೆಚ್ಚರಿಕೆ ಅಗತ್ಯ’ ಎಂಬ ನಾಮಫಲಕ ಹಿಡಿದು ಸಾಗಿದರು. ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ನೆರೆದಿದ್ದ ಜನರಿಗೆ ಮಧುಮೇಹ ಜಾಗೃತಿಯ ಕರಪತ್ರ ಹಂಚಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.