ಪತ್ರಕರ್ತ ಬಿ.ಎಂ.ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಇಂದು ಎಲ್ಲಾ ಕ್ಷೇತ್ರದಲ್ಲೂ ಬೂಟಾಟಿಕೆ ಇದೆ. ನಮ್ಮ ಇಂದಿನ ರಾಜಕೀಯದಲ್ಲಿ ಆದರ್ಶ ವ್ಯಕ್ತಿಗಳು ಅಂದುಕೊಂಡವರೆ ಕಪಟಿಗಳಾಗುತ್ತಿದ್ದಾರೆ. ಇಂತಹವರನ್ನು ನಾವು ಪಕ್ಕಕ್ಕೆ ಸರಿಸಿ ಬದ್ಧತೆ ಇರುವವರನ್ನು ಅನುಸರಿಸಬೇಕಿದೆ. ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸಬೇಕು. ಆದರೆ, ಪ್ರಶ್ನಿಸುವಾಗ ನಿರ್ಭೀತಿ, ವಿನಯವಂತಿಕೆ, ಜ್ಞಾನದಾಹ ನಮ್ಮಲ್ಲಿ ಇರಬೇಕು’ ಎಂದರು.