‘ದೂರು ಸ್ವೀಕರಿಸಿ ನಿವಾರಿಸುವ ವ್ಯವಸ್ಥೆಯನ್ನೇ ಟ್ವಿಟರ್ ಮಾಡಿಕೊಂಡಿಲ್ಲ. ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ, ಭಯ ಉಂಟು ಮಾಡುವ ಟ್ವೀಟ್ಗಳನ್ನು ಅಳಿಸುವ ವ್ಯವಸ್ಥೆಯೂ ಇಲ್ಲ. ಟ್ವಿಟರ್ನ ಮೂವರು ನಿರ್ದೇಶಕರಲ್ಲಿ ಯಾರೂ ಭಾರತದ ನಿವಾಸಿಗಳಲ್ಲ. ಆದ್ದರಿಂದ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಂದು ಹೇಳಿಕೊಂಡಿರುವ ಮನಿಶ್ ಮಹೇಶ್ವರಿ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸರ ಪರ ವಕೀಲರು ವಿವರಿಸಿದರು.