ಕೊರೊನಾ ಸೋಂಕು ತಡೆಯಲು ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಸರಿಯಾದ ವೇತನ ಸಿಗುತ್ತಿಲ್ಲ. ಸೋಂಕಿನ ವಿರುದ್ಧ ಸೂಕ್ತ ರಕ್ಷಣೆಯೂ ಇಲ್ಲ, ಸಾಫ್ಟ್ವೇರ್ ಅವ್ಯವಸ್ಥೆಯಿಂದ ಸಮಸ್ಯೆ ಎದುರಿಸುವಂತಾಗಿದೆ. ದುಡಿತಕ್ಕೆ ಸಮಾನ ವೇತನ ಸಿಗದೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು. ಸೇವೆಗೆ ಪ್ರತಿಯಾಗಿ ಕನಿಷ್ಠ ₹ 12,000 ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.