<p><strong>ಉಡುಪಿ:</strong> ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಿಂದ 30ರವರೆಗೆ ಜಿಲ್ಲೆಯ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.</p>.<p>ಕೇಂದ್ರ ಸರ್ಕಾರದ ಸೂಚನೆಯಂತೆ ‘ಪರ್ಯಟನ್ ಪರ್ವ್’ ಯೋಜನೆಯಡಿ ಪ್ರವಾಸಿಗರನ್ನು ಸೆಳೆಯಲು ‘ಉತ್ಸವ’ಗಳನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p><strong>ಏನಿದು ಪರ್ಯಟನ್ ಪರ್ವ್?</strong></p>.<p>ದೇಶದ ಅನನ್ಯ ಹಾಗೂ ವಿಶಿಷ್ಟ ಪ್ರವಾಸಿತಾಣಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ‘ಪರ್ಯಟನ್ ಪರ್ವ್’ ಹೆಸರಿನಲ್ಲಿ ಉತ್ಸವಗಳನ್ನು ಆಯೋಜಿಸಲು ನಿರ್ಧರಿಸಿದೆ. ಅದರಂತೆ ಕೇಂದ್ರ ಗುರುತಿಸಿರುವ ಪಟ್ಟಿಯಲ್ಲಿ ಮಲ್ಪೆ, ಪಡುಬಿದ್ರಿ, ತ್ರಾಸಿ, ಮರವಂತೆ ಬೀಚ್ಗಳು, ಕಾರ್ಕಳದ ಸ್ಮಾರಕಗಳು ಸ್ಥಾನ ಪಡೆದಿವೆ. ಹಾಗಾಗಿ, ಈ ತಾಣಗಳಲ್ಲಿ ಉತ್ಸವಗಳನ್ನು ಆಯೋಜಿಸುವಂತೆ ಸೂಚನೆ ನೀಡಿದೆ ಎನ್ನುತ್ತಾರೆ ಅವರು.</p>.<p>ಕೇಂದ್ರದ ನಿರ್ದೇಶನದಂತೆ ಮಲ್ಪೆ ಬೀಚ್ನಲ್ಲಿ ಸೆ.27ರಿಂದ ನಾಲ್ಕುದಿನಗಳ ಕಾಲ ‘ಬೀಚ್ ಫೆಸ್ಟಿವಲ್’ ನಡೆಸಲಾಗುವುದು.ಹಂಪಿಯಲ್ಲಿ ‘ಹಂಪಿ ಉತ್ಸವ’ವನ್ನು ಅದ್ಧೂರಿಯಾಗಿ ನಡೆಸುವಂತೆ ಮಲ್ಪೆಯಲ್ಲಿ ‘ಬೀಚ್ ಉತ್ಸವ’ ಮಾಡಲಾಗುವುದು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ತಿಳಿಸಿದರು.</p>.<p>‘ಟೂರಿಸಂ ಫಾರ್ ಆಲ್’ ಎಂಬ ಘೋಷಣೆಯಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಾಲ್ಕು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಮಲ್ಪೆಬೀಚ್ನಲ್ಲಿ ವೈನ್ ಮೇಳ, ಫುಡ್ ಫೆಸ್ಟಿವಲ್, ಶಾಪಿಂಗ್, ಪ್ಯಾರಾ ಒಲಿಂಪಿಕ್ಸ್ ವಾಲಿಬಾಲ್ ಕ್ರೀಡಾಕೂಟಗಳು ನಡೆಯಲಿವೆ ಎಂದರು.</p>.<p>ಬೆಂಗಳೂರಿನ ವೈನ್ಬೋರ್ಡ್ ‘ವೈನ್ಮೇಳ’ದ ಉಸ್ತುವಾರಿ ವಹಿಸಿಕೊಂಡಿದೆ. ಪ್ರವಾಸಿಗರು ಸ್ವತಃ ಕಾಲಿನಿಂದ ದ್ರಾಕ್ಷಿಯನ್ನು ತುಳಿದು ವೈನ್ ತಯಾರಿಸಬಹುದು. ಜತೆಗೆ, ಬಗೆಬಗೆಯ ವೈನ್ ರುಚಿಯನ್ನು ಮೇಳದಲ್ಲಿ ಆಸ್ವಾದಿಸಬಹುದು ಎಂದು ಅನಿತಾ ತಿಳಿಸಿದರು.</p>.<p>ಈಚೆಗೆ ಪ್ರವಾಸೋದ್ಯಮದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಪ್ರವಾಸ ಮಾಡಲು ಮೀಸಲಿರಿಸುತ್ತಿದ್ದಾರೆ. ಆದರೆ, ಪ್ರವಾಸಕ್ಕೆ ಎಲ್ಲಿಗೆ ಹೋಗುವುದು ಎಂಬ ಮಾಹಿತಿಯ ಕೊರತೆ ಅವರನ್ನು ಕಾಡುತ್ತಿದೆ. ಬೀಚ್ ಫೆಸ್ಟಿವಲ್ನಂತಹ ಕಾರ್ಯಕ್ರಮಗಳು ಅವರಿಗೆ ಹೆಚ್ಚು ಉಪಯುಕ್ತ ಎಂದರು.</p>.<p>ಉಡುಪಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ‘ತರಂಗರಂಗ ಕಲಾಯಾನ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಹೆರಿಟೇಜ್ ಬೋಟ್ ಸೈಲ್’ ಹೆಸರಿನಲ್ಲಿ ಬೋಟ್ನಲ್ಲಿ ಸುಮಾರು 50 ಪ್ರವಾಸಿಗರನ್ನು ಸಮುದ್ರದೊಳಗೆ ಕರೆದೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.</p>.<p>ಸೆ.30ರಂದು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಯುವಮೆರಿಡಿಯನ್ ಹೆಲಿಪ್ಯಾಡ್ ಗ್ರೌಂಡ್ನಲ್ಲಿ ವಿದ್ಯಾರ್ಥಿಗಳಿಗೆ ರಿಮೋಟ್ ಕಂಟ್ರೋಲ್ ಏರ್ ಷೋ ಇದೆ. ಸೈಕ್ಲಿಂಗ್ ಸ್ಪರ್ಧೆಯೂ ನಡೆಯಲಿದೆ. ಅಂದೇ ಕಡಲ ತೀರಗಳಲ್ಲಿ ಬೆಳಿಗ್ಗೆ 8ರಿಂದ ಸ್ವಚ್ಛ ಭಾರತ ಅಭಿಯಾನ ನಡೆಯಲಿದೆ.</p>.<p>ಸೆ.27ರಿಂದ 30ವರೆಗೆ ಮಲ್ಪೆ, ಪಡುಬಿದ್ರಿ, ತ್ರಾಸಿ–ಮರವಂತೆ, ಕೋಡಿ ಕಡಲತೀರದಲ್ಲಿ ಸರ್ಫಿಂಗ್ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಿಂದ 30ರವರೆಗೆ ಜಿಲ್ಲೆಯ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.</p>.<p>ಕೇಂದ್ರ ಸರ್ಕಾರದ ಸೂಚನೆಯಂತೆ ‘ಪರ್ಯಟನ್ ಪರ್ವ್’ ಯೋಜನೆಯಡಿ ಪ್ರವಾಸಿಗರನ್ನು ಸೆಳೆಯಲು ‘ಉತ್ಸವ’ಗಳನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p><strong>ಏನಿದು ಪರ್ಯಟನ್ ಪರ್ವ್?</strong></p>.<p>ದೇಶದ ಅನನ್ಯ ಹಾಗೂ ವಿಶಿಷ್ಟ ಪ್ರವಾಸಿತಾಣಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ‘ಪರ್ಯಟನ್ ಪರ್ವ್’ ಹೆಸರಿನಲ್ಲಿ ಉತ್ಸವಗಳನ್ನು ಆಯೋಜಿಸಲು ನಿರ್ಧರಿಸಿದೆ. ಅದರಂತೆ ಕೇಂದ್ರ ಗುರುತಿಸಿರುವ ಪಟ್ಟಿಯಲ್ಲಿ ಮಲ್ಪೆ, ಪಡುಬಿದ್ರಿ, ತ್ರಾಸಿ, ಮರವಂತೆ ಬೀಚ್ಗಳು, ಕಾರ್ಕಳದ ಸ್ಮಾರಕಗಳು ಸ್ಥಾನ ಪಡೆದಿವೆ. ಹಾಗಾಗಿ, ಈ ತಾಣಗಳಲ್ಲಿ ಉತ್ಸವಗಳನ್ನು ಆಯೋಜಿಸುವಂತೆ ಸೂಚನೆ ನೀಡಿದೆ ಎನ್ನುತ್ತಾರೆ ಅವರು.</p>.<p>ಕೇಂದ್ರದ ನಿರ್ದೇಶನದಂತೆ ಮಲ್ಪೆ ಬೀಚ್ನಲ್ಲಿ ಸೆ.27ರಿಂದ ನಾಲ್ಕುದಿನಗಳ ಕಾಲ ‘ಬೀಚ್ ಫೆಸ್ಟಿವಲ್’ ನಡೆಸಲಾಗುವುದು.ಹಂಪಿಯಲ್ಲಿ ‘ಹಂಪಿ ಉತ್ಸವ’ವನ್ನು ಅದ್ಧೂರಿಯಾಗಿ ನಡೆಸುವಂತೆ ಮಲ್ಪೆಯಲ್ಲಿ ‘ಬೀಚ್ ಉತ್ಸವ’ ಮಾಡಲಾಗುವುದು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ತಿಳಿಸಿದರು.</p>.<p>‘ಟೂರಿಸಂ ಫಾರ್ ಆಲ್’ ಎಂಬ ಘೋಷಣೆಯಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಾಲ್ಕು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಮಲ್ಪೆಬೀಚ್ನಲ್ಲಿ ವೈನ್ ಮೇಳ, ಫುಡ್ ಫೆಸ್ಟಿವಲ್, ಶಾಪಿಂಗ್, ಪ್ಯಾರಾ ಒಲಿಂಪಿಕ್ಸ್ ವಾಲಿಬಾಲ್ ಕ್ರೀಡಾಕೂಟಗಳು ನಡೆಯಲಿವೆ ಎಂದರು.</p>.<p>ಬೆಂಗಳೂರಿನ ವೈನ್ಬೋರ್ಡ್ ‘ವೈನ್ಮೇಳ’ದ ಉಸ್ತುವಾರಿ ವಹಿಸಿಕೊಂಡಿದೆ. ಪ್ರವಾಸಿಗರು ಸ್ವತಃ ಕಾಲಿನಿಂದ ದ್ರಾಕ್ಷಿಯನ್ನು ತುಳಿದು ವೈನ್ ತಯಾರಿಸಬಹುದು. ಜತೆಗೆ, ಬಗೆಬಗೆಯ ವೈನ್ ರುಚಿಯನ್ನು ಮೇಳದಲ್ಲಿ ಆಸ್ವಾದಿಸಬಹುದು ಎಂದು ಅನಿತಾ ತಿಳಿಸಿದರು.</p>.<p>ಈಚೆಗೆ ಪ್ರವಾಸೋದ್ಯಮದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಪ್ರವಾಸ ಮಾಡಲು ಮೀಸಲಿರಿಸುತ್ತಿದ್ದಾರೆ. ಆದರೆ, ಪ್ರವಾಸಕ್ಕೆ ಎಲ್ಲಿಗೆ ಹೋಗುವುದು ಎಂಬ ಮಾಹಿತಿಯ ಕೊರತೆ ಅವರನ್ನು ಕಾಡುತ್ತಿದೆ. ಬೀಚ್ ಫೆಸ್ಟಿವಲ್ನಂತಹ ಕಾರ್ಯಕ್ರಮಗಳು ಅವರಿಗೆ ಹೆಚ್ಚು ಉಪಯುಕ್ತ ಎಂದರು.</p>.<p>ಉಡುಪಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ‘ತರಂಗರಂಗ ಕಲಾಯಾನ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಹೆರಿಟೇಜ್ ಬೋಟ್ ಸೈಲ್’ ಹೆಸರಿನಲ್ಲಿ ಬೋಟ್ನಲ್ಲಿ ಸುಮಾರು 50 ಪ್ರವಾಸಿಗರನ್ನು ಸಮುದ್ರದೊಳಗೆ ಕರೆದೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.</p>.<p>ಸೆ.30ರಂದು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಯುವಮೆರಿಡಿಯನ್ ಹೆಲಿಪ್ಯಾಡ್ ಗ್ರೌಂಡ್ನಲ್ಲಿ ವಿದ್ಯಾರ್ಥಿಗಳಿಗೆ ರಿಮೋಟ್ ಕಂಟ್ರೋಲ್ ಏರ್ ಷೋ ಇದೆ. ಸೈಕ್ಲಿಂಗ್ ಸ್ಪರ್ಧೆಯೂ ನಡೆಯಲಿದೆ. ಅಂದೇ ಕಡಲ ತೀರಗಳಲ್ಲಿ ಬೆಳಿಗ್ಗೆ 8ರಿಂದ ಸ್ವಚ್ಛ ಭಾರತ ಅಭಿಯಾನ ನಡೆಯಲಿದೆ.</p>.<p>ಸೆ.27ರಿಂದ 30ವರೆಗೆ ಮಲ್ಪೆ, ಪಡುಬಿದ್ರಿ, ತ್ರಾಸಿ–ಮರವಂತೆ, ಕೋಡಿ ಕಡಲತೀರದಲ್ಲಿ ಸರ್ಫಿಂಗ್ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>