<p><strong>ಉಡುಪಿ:</strong> ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಗಾರ ಹುಳುಗಳು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧವಾ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2005ನೇ ಸಾಲಿನ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.</p>.<p>ಯಾವುದೇ ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಬಲ್ಲ ಈ ಹುಳುವಿನ ಬೆಲೆ ಕೆ.ಜಿ.ಗೆ ₹10 ಸಾವಿರವಿದೆ. ಇದಕ್ಕೆ ಇಂಗ್ಲಿಷ್ನಲ್ಲಿ ಬ್ಲ್ಯಾಕ್ ಸೋಲ್ಜರ್ ಫ್ಲೈ ಎಂಬುದಾಗಿ ಕರೆಯುತ್ತಾರೆ.</p>.<p>ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ಅವರು ಕಳೆದ ಮೂರು ವರ್ಷಗಳಿಂದ ಈ ಹುಳುವಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕೃಷಿ ಮೇಳಕ್ಕೆ ಭೇಟಿ ನೀಡುವವರಿಗೆ ಅವರು ಹುಳುಗಳ ಜೀವನಚಕ್ರದ ಬಗ್ಗೆ ವಿವರಣೆಯನ್ನೂ ನೀಡುತ್ತಿದ್ದಾರೆ.</p>.<p>‘ಬಂಗಾರದ ಹುಳುಗಳು ನಾಲ್ಕು ಹಂತಗಳಲ್ಲಿ ಬೆಳೆಯುತ್ತವೆ. ಮೊದಲನೆಯದಾಗಿ ರೆಕ್ಕೆ ಇರುವ ಪ್ರೌಢ ಕೀಟಗಳು ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಮೂರರಿಂದ ನಾಲ್ಕು ದಿನಗಳಲ್ಲಿ ಮೊಟ್ಟೆಯೊಡೆದು ಹುಳುವಿನ ಮರಿಗಳು ಹೊರಬರುತ್ತವೆ. ಆ ಹುಳುಗಳನ್ನು ಅಕ್ಕಿ ತೌಡನ್ನು ನೆನೆಸಿದ ಟ್ರೇಯಲ್ಲಿರಿಸುತ್ತೇವೆ. ನಾಲ್ಕೈದು ದಿವಸ ಕಳೆದ ಬಳಿಕ ಹುಳುಗಳನ್ನು ಹಸಿ ತ್ಯಾಜ್ಯವಿರುವ ಸಿಮೆಂಟ್ ತೊಟ್ಟಿಗೆ ಹಾಕುತ್ತೇವೆ’ ಎಂದು ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ವಿವರಿಸಿದರು.</p>.<p>‘12ರಿಂದ 15 ದಿವಸಗಳವರೆಗೆ ಹಸಿ ಕಸವನ್ನು ತಿನ್ನುವ ಹುಳುಗಳು ಅನಂತರ ಗೂಡಾಗಿ ಮಾರ್ಪಡುತ್ತವೆ. ಅದರೊಳಗಿನ ಕೀಟಗಳು ಹಾರಿ ಹೋಗುತ್ತವೆ. ಹಸಿ ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಗೆ ಬಳಸಬಹುದು. ಹುಳುಗಳನ್ನು ನಾಟಿ ಕೋಳಿಗಳಿಗೆ ಆಹಾರವಾಗಿಯೂ ನೀಡಬಹುದು. ಈ ಹುಳುಗಳು ತಮ್ಮ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು ತಿನ್ನುತ್ತವೆ’ ಎಂದು ವಿವರಿಸಿದರು.</p>.<p> <strong>ನಾಲ್ಕು ಹೊಸ ಭತ್ತದ ತಳಿ ಬಿಡುಗಡೆ</strong> </p><p>ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವು ಅಭಿವೃದ್ಧಿಪಡಿಸಿರುವ ನಾಲ್ಕು ಹೊಸ ಭತ್ತದ ತಳಿಗಳು ಬಿಡುಗಡೆಗೊಂಡಿದ್ದು ಅವುಗಳನ್ನು ಕೃಷಿಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ‘ಸಹ್ಯಾದ್ರಿ ಪಂಚಮುಖಿ ಸಹ್ಯಾದ್ರಿ ಬ್ರಹ್ಮ ಸಹ್ಯಾದ್ರಿ ಸಪ್ತಮಿ ಮತ್ತು ಕಜೆ 25–9 ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ವಿವಿಧ ಹಂತಗಳಲ್ಲಿ ಪ್ರಾಯೋಗಿಕವಾಗಿ ಈ ತಳಿಯ ಭತ್ತವನ್ನು ಬೆಳೆದ ಬಳಿಕ ಅದಕ್ಕೆ ಅಂಗೀಕಾರ ಲಭಿಸಿದೆ. ನಂತರ ಬಿಡುಗಡೆ ಮಾಡಿದ್ದೇವೆ’ ಎಂದು ಕೆವಿಕೆಯ ವಿಜ್ಞಾನಿ ಶಂಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಗಾರ ಹುಳುಗಳು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧವಾ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2005ನೇ ಸಾಲಿನ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.</p>.<p>ಯಾವುದೇ ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಬಲ್ಲ ಈ ಹುಳುವಿನ ಬೆಲೆ ಕೆ.ಜಿ.ಗೆ ₹10 ಸಾವಿರವಿದೆ. ಇದಕ್ಕೆ ಇಂಗ್ಲಿಷ್ನಲ್ಲಿ ಬ್ಲ್ಯಾಕ್ ಸೋಲ್ಜರ್ ಫ್ಲೈ ಎಂಬುದಾಗಿ ಕರೆಯುತ್ತಾರೆ.</p>.<p>ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ಅವರು ಕಳೆದ ಮೂರು ವರ್ಷಗಳಿಂದ ಈ ಹುಳುವಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕೃಷಿ ಮೇಳಕ್ಕೆ ಭೇಟಿ ನೀಡುವವರಿಗೆ ಅವರು ಹುಳುಗಳ ಜೀವನಚಕ್ರದ ಬಗ್ಗೆ ವಿವರಣೆಯನ್ನೂ ನೀಡುತ್ತಿದ್ದಾರೆ.</p>.<p>‘ಬಂಗಾರದ ಹುಳುಗಳು ನಾಲ್ಕು ಹಂತಗಳಲ್ಲಿ ಬೆಳೆಯುತ್ತವೆ. ಮೊದಲನೆಯದಾಗಿ ರೆಕ್ಕೆ ಇರುವ ಪ್ರೌಢ ಕೀಟಗಳು ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಮೂರರಿಂದ ನಾಲ್ಕು ದಿನಗಳಲ್ಲಿ ಮೊಟ್ಟೆಯೊಡೆದು ಹುಳುವಿನ ಮರಿಗಳು ಹೊರಬರುತ್ತವೆ. ಆ ಹುಳುಗಳನ್ನು ಅಕ್ಕಿ ತೌಡನ್ನು ನೆನೆಸಿದ ಟ್ರೇಯಲ್ಲಿರಿಸುತ್ತೇವೆ. ನಾಲ್ಕೈದು ದಿವಸ ಕಳೆದ ಬಳಿಕ ಹುಳುಗಳನ್ನು ಹಸಿ ತ್ಯಾಜ್ಯವಿರುವ ಸಿಮೆಂಟ್ ತೊಟ್ಟಿಗೆ ಹಾಕುತ್ತೇವೆ’ ಎಂದು ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ವಿವರಿಸಿದರು.</p>.<p>‘12ರಿಂದ 15 ದಿವಸಗಳವರೆಗೆ ಹಸಿ ಕಸವನ್ನು ತಿನ್ನುವ ಹುಳುಗಳು ಅನಂತರ ಗೂಡಾಗಿ ಮಾರ್ಪಡುತ್ತವೆ. ಅದರೊಳಗಿನ ಕೀಟಗಳು ಹಾರಿ ಹೋಗುತ್ತವೆ. ಹಸಿ ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಗೆ ಬಳಸಬಹುದು. ಹುಳುಗಳನ್ನು ನಾಟಿ ಕೋಳಿಗಳಿಗೆ ಆಹಾರವಾಗಿಯೂ ನೀಡಬಹುದು. ಈ ಹುಳುಗಳು ತಮ್ಮ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು ತಿನ್ನುತ್ತವೆ’ ಎಂದು ವಿವರಿಸಿದರು.</p>.<p> <strong>ನಾಲ್ಕು ಹೊಸ ಭತ್ತದ ತಳಿ ಬಿಡುಗಡೆ</strong> </p><p>ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವು ಅಭಿವೃದ್ಧಿಪಡಿಸಿರುವ ನಾಲ್ಕು ಹೊಸ ಭತ್ತದ ತಳಿಗಳು ಬಿಡುಗಡೆಗೊಂಡಿದ್ದು ಅವುಗಳನ್ನು ಕೃಷಿಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ‘ಸಹ್ಯಾದ್ರಿ ಪಂಚಮುಖಿ ಸಹ್ಯಾದ್ರಿ ಬ್ರಹ್ಮ ಸಹ್ಯಾದ್ರಿ ಸಪ್ತಮಿ ಮತ್ತು ಕಜೆ 25–9 ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ವಿವಿಧ ಹಂತಗಳಲ್ಲಿ ಪ್ರಾಯೋಗಿಕವಾಗಿ ಈ ತಳಿಯ ಭತ್ತವನ್ನು ಬೆಳೆದ ಬಳಿಕ ಅದಕ್ಕೆ ಅಂಗೀಕಾರ ಲಭಿಸಿದೆ. ನಂತರ ಬಿಡುಗಡೆ ಮಾಡಿದ್ದೇವೆ’ ಎಂದು ಕೆವಿಕೆಯ ವಿಜ್ಞಾನಿ ಶಂಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>