ಇಲ್ಲಿನ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ ಅಳಿವೆಯಲ್ಲಿ ತುಂಬಿರುವ ಹೂಳು ದೋಣಿಗಳಿಗೆ ಅಪಾಯ ಉಂಟುಮಾಡುತ್ತಿದೆ. ಕೆಲವು ವರ್ಷಗಳಿಂದ ಡ್ರೆಜಿಂಗ್ ಮಾಡಿ ಹೂಳು ತೆಗೆಯಬೇಕು ಎಂದು ಮೀನುಗಾರರು ಆಗ್ರಹಿಸುತ್ತಿದ್ದರೂ ಕ್ರಮ ಆಗಿಲ್ಲ. ಸಂಬಂಧಿಸಿದವರು ಇನ್ನಾದರೂ ಗಮನ ಹರಿಸಿ, ಅಳಿವೆಯಲ್ಲಿ ಡ್ರೆಜಿಂಗ್ ಮಾಡಿ ಹೂಳು ತೆಗೆದು ಆಳಗೊಳಿಸಬೇಕು. ಇಲ್ಲವಾದರೆ ಇಲ್ಲಿ ಇನ್ನಷ್ಟು ಅಪಾಯ ಸಂಭವಿಸಲಿದೆ’ ಎಂದು ಎಚ್ಚರಿಸಿದ್ದಾರೆ.