ಪಡುಬಿದ್ರಿ (ಉಡುಪಿ): ಇಲ್ಲಿನ ಹೆಜಮಾಡಿಯಿಂದ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಐವರನ್ನು ರಕ್ಷಣೆ ಮಾಡಲಾಗಿದೆ.
ಹೆಜಮಾಡಿಯ ಅಳಿವೆ ಬಳಿ ದುರ್ಘಟನೆ ನಡೆದಿದ್ದು, ಹೆಜಮಾಡಿ ಕೋಡಿಯ ಸುಖೇಶ್ (25) ನಾಪತ್ತೆಯಾದ ಮೀನುಗಾರರ. ಏಕನಾಥ ಕರ್ಕೇರ, ನಾಗೇಶ್, ಪಾಂಡುರಂಗ, ನೀರಜ್, ರಾಜೇಶ್ ಅವರನ್ನು ರಕ್ಷಣೆ ಮಾಡಲಾಗಿದೆ.
ಕೋಡಿಯ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿ ಮೀನುಗಾರಿಕೆಮುಗಿಸಿ ಹಿಂದಿರುಗುತ್ತಿದ್ದಾಗ ಸಮುದ್ರದ ಅಲೆಗಳ ಒತ್ತಡಕ್ಕೆ ಸಿಲುಕಿ ಮುಳುಗಿದೆ.