<p><strong>ಬ್ರಹ್ಮಾವರ</strong>: ಇಲ್ಲಿನ ಎಸ್.ಎಂ.ಎಸ್ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಾದಕ ವ್ಯಸನ ವಿರೋಧ ದಿನಾಚರಣೆ ಗುರುವಾರ ನಡೆಯಿತು.</p>.<p>ಇಲ್ಲಿನ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಶೋಕ ಎಂ. ಮಾತನಾಡಿ, ಮಾದಕ ದ್ರವ್ಯ ಸಮಾಜದ ಸೌಹಾರ್ದತೆ, ಕುಟುಂಬಗಳ ಶಾಂತಿ, ಯುವಜನರ ಭವಿಷ್ಯ ನಾಶ ಮಾಡುತ್ತಿದೆ. ಮಾದಕ ವ್ಯಸನದ ವಿರುದ್ಧ ಎಚ್ಚರಿಕೆ ಮೂಡಿಸಿ, ಜನರಲ್ಲಿ ಜಾಗೃತಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ದಿನಾಚರಣೆ ಒಂದು ದಿನಕ್ಕೆ ಮಾತ್ರವಲ್ಲ, ಇದು ಸಂಕಲ್ಪದ ದಿನ. ನಶೆಮುಕ್ತ ಸಮಾಜದತ್ತ ಮುನ್ನಡೆಯುವ ನಿಸ್ಸೀಮ ಬದ್ಧತೆ ಎಂದರು.</p>.<p>ವಿದ್ಯಾರ್ಥಿಗಳು, ಯುವಕರು, ಪೋಷಕರು ಮಾದಕ ವ್ಯಸನದ ಅಪಾಯಗಳನ್ನು ಅರಿಯಬೇಕಾಗಿರುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು, ಸರ್ಕಾರ ಕೈಜೋಡಿಸಿ ಈ ಅಭಿಯಾನ ಯಶಸ್ವಿಗೊಳಿಸಬೇಕು. ನಾವೆಲ್ಲರೂ ಕೈಜೋಡಿಸಿ ನಶೆಮುಕ್ತ ಭಾರತದ ಕನಸು ಕಂಡು ಅದನ್ನು ನಿಜವಾಗಿಸೋಣ ಎಂದು ಹೇಳಿದರು.</p>.<p>ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಂತೋಷ ನೀಲಾವರ ಸ್ವಾಗತಿಸಿ ವಂದಿಸಿದರು. ಪ್ರಸನ್ನ ಅಡಿಗ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಇಲ್ಲಿನ ಎಸ್.ಎಂ.ಎಸ್ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಾದಕ ವ್ಯಸನ ವಿರೋಧ ದಿನಾಚರಣೆ ಗುರುವಾರ ನಡೆಯಿತು.</p>.<p>ಇಲ್ಲಿನ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಶೋಕ ಎಂ. ಮಾತನಾಡಿ, ಮಾದಕ ದ್ರವ್ಯ ಸಮಾಜದ ಸೌಹಾರ್ದತೆ, ಕುಟುಂಬಗಳ ಶಾಂತಿ, ಯುವಜನರ ಭವಿಷ್ಯ ನಾಶ ಮಾಡುತ್ತಿದೆ. ಮಾದಕ ವ್ಯಸನದ ವಿರುದ್ಧ ಎಚ್ಚರಿಕೆ ಮೂಡಿಸಿ, ಜನರಲ್ಲಿ ಜಾಗೃತಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ದಿನಾಚರಣೆ ಒಂದು ದಿನಕ್ಕೆ ಮಾತ್ರವಲ್ಲ, ಇದು ಸಂಕಲ್ಪದ ದಿನ. ನಶೆಮುಕ್ತ ಸಮಾಜದತ್ತ ಮುನ್ನಡೆಯುವ ನಿಸ್ಸೀಮ ಬದ್ಧತೆ ಎಂದರು.</p>.<p>ವಿದ್ಯಾರ್ಥಿಗಳು, ಯುವಕರು, ಪೋಷಕರು ಮಾದಕ ವ್ಯಸನದ ಅಪಾಯಗಳನ್ನು ಅರಿಯಬೇಕಾಗಿರುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು, ಸರ್ಕಾರ ಕೈಜೋಡಿಸಿ ಈ ಅಭಿಯಾನ ಯಶಸ್ವಿಗೊಳಿಸಬೇಕು. ನಾವೆಲ್ಲರೂ ಕೈಜೋಡಿಸಿ ನಶೆಮುಕ್ತ ಭಾರತದ ಕನಸು ಕಂಡು ಅದನ್ನು ನಿಜವಾಗಿಸೋಣ ಎಂದು ಹೇಳಿದರು.</p>.<p>ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಂತೋಷ ನೀಲಾವರ ಸ್ವಾಗತಿಸಿ ವಂದಿಸಿದರು. ಪ್ರಸನ್ನ ಅಡಿಗ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>