<p><strong>ಬ್ರಹ್ಮಾವರ:</strong> ‘ಬಹು ಧರ್ಮ, ಬಹು ಜಾತಿಗಳ ಈ ದೇಶದಲ್ಲಿ ನಾವೆಲ್ಲಾ ಒಂದಾಗಿ ಸಹೋದರತೆಯ ಭಾವದಲ್ಲಿ ಬದುಕಬೇಕು’ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಕ್ಷಿಣ ವಲಯದ ಕಾರ್ಯದರ್ಶಿ ಜಯಣ್ಣ ಹೇಳಿದರು. </p>.<p>ಚೇರ್ಕಾಡಿಯ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಕ್ಷೆಗೆ ಭಾರತೀಯರನ್ನು ಒಂದುಗೂಡಿಸುವ ಶಕ್ತಿ ಇದೆ. ರಕ್ಷೆಯಲ್ಲಿರುವ ಅನೇಕ ದಾರದ ಎಳೆಗಳು ನಮ್ಮಲ್ಲಿರುವ ಬೇರೆ ಬೇರೆ ಭಾವಗಳನ್ನು ಬದಿಗಿರಿಸಿ ಐಕ್ಯಭಾವವನ್ನು ಮೂಡಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಮಹತ್ವ ತಿಳಿಸಿದರು.</p>.<p>ಭೌತವಿಜ್ಞಾನ ಉಪನ್ಯಾಸಕ ಪ್ರದೀಪ ಅವರು, ರಕ್ಷಾಬಂಧನ ಆಚರಣೆಯ ಮೂಲಕ ನಿಮ್ಮೆಲ್ಲರ ಆಸೆಗಳು ಈಡೇರಲಿ. ನಿಮ್ಮ ಸುತ್ತಮುತ್ತಲಿನ ಸಂಬಂಧಿಗಳು, ಜನರ ಮೇಲೆ ನಿಮಗೆ ನಂಬಿಕೆ ಮೂಡಲಿ ಎಂದರು.</p>.<p>ವಿದ್ಯಾರ್ಥಿ ನರಹರಿ ಭಟ್ ಸಂಸ್ಕೃತ ಭಾಷಾ ದಿನದ ಮಹತ್ವ ತಿಳಿಸಿದರು. ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ ರಕ್ಷಾಬಂಧನದ ಶುಭಾಶಯ ಹೇಳಿದರು. ಬಳಿಕ ವಿದ್ಯಾರ್ಥಿಗಳು ಅತಿಥಿಗಳಿಂದ ರಕ್ಷೆ ಕಟ್ಟಿಸಿಕೊಂಡು ಆಶೀರ್ವಾದ ಪಡೆದರು. ಹಿಂದಿ ಉಪನ್ಯಾಸಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ‘ಬಹು ಧರ್ಮ, ಬಹು ಜಾತಿಗಳ ಈ ದೇಶದಲ್ಲಿ ನಾವೆಲ್ಲಾ ಒಂದಾಗಿ ಸಹೋದರತೆಯ ಭಾವದಲ್ಲಿ ಬದುಕಬೇಕು’ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಕ್ಷಿಣ ವಲಯದ ಕಾರ್ಯದರ್ಶಿ ಜಯಣ್ಣ ಹೇಳಿದರು. </p>.<p>ಚೇರ್ಕಾಡಿಯ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಕ್ಷೆಗೆ ಭಾರತೀಯರನ್ನು ಒಂದುಗೂಡಿಸುವ ಶಕ್ತಿ ಇದೆ. ರಕ್ಷೆಯಲ್ಲಿರುವ ಅನೇಕ ದಾರದ ಎಳೆಗಳು ನಮ್ಮಲ್ಲಿರುವ ಬೇರೆ ಬೇರೆ ಭಾವಗಳನ್ನು ಬದಿಗಿರಿಸಿ ಐಕ್ಯಭಾವವನ್ನು ಮೂಡಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಮಹತ್ವ ತಿಳಿಸಿದರು.</p>.<p>ಭೌತವಿಜ್ಞಾನ ಉಪನ್ಯಾಸಕ ಪ್ರದೀಪ ಅವರು, ರಕ್ಷಾಬಂಧನ ಆಚರಣೆಯ ಮೂಲಕ ನಿಮ್ಮೆಲ್ಲರ ಆಸೆಗಳು ಈಡೇರಲಿ. ನಿಮ್ಮ ಸುತ್ತಮುತ್ತಲಿನ ಸಂಬಂಧಿಗಳು, ಜನರ ಮೇಲೆ ನಿಮಗೆ ನಂಬಿಕೆ ಮೂಡಲಿ ಎಂದರು.</p>.<p>ವಿದ್ಯಾರ್ಥಿ ನರಹರಿ ಭಟ್ ಸಂಸ್ಕೃತ ಭಾಷಾ ದಿನದ ಮಹತ್ವ ತಿಳಿಸಿದರು. ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ ರಕ್ಷಾಬಂಧನದ ಶುಭಾಶಯ ಹೇಳಿದರು. ಬಳಿಕ ವಿದ್ಯಾರ್ಥಿಗಳು ಅತಿಥಿಗಳಿಂದ ರಕ್ಷೆ ಕಟ್ಟಿಸಿಕೊಂಡು ಆಶೀರ್ವಾದ ಪಡೆದರು. ಹಿಂದಿ ಉಪನ್ಯಾಸಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>