<p><strong>ಉಡುಪಿ:</strong> ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಸ್ವಾಗತಕಮಾನುಗಳು ಪರ್ಯಾಯದ ವೈಭವಕ್ಕೆ ಮೆರಗು ನೀಡುತ್ತಿವೆ. ರಥಬೀದಿಗೆ ಸಂಪರ್ಕಿಸುವ ತೆಂಕಪೇಟೆ ಮಾರ್ಗದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡಿರುವ ಬೃಹತ್ ಸ್ವಾಗತಕಮಾನುಜನರನ್ನು ಆಕರ್ಷಿಸುತ್ತಿದೆ.</p>.<p><strong>ಏನಿದರ ವಿಶೇಷ</strong></p>.<p>ನಗರದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅವಳಡಿಸಲಾಗಿರುವ ಸ್ವಾಗತ ಗೋಪುರಗಳು, ಕಮಾನುಗಳು ಕರಾವಳಿಯ ಸಂಸ್ಕೃತಿ, ಪರಂಪರೆ, ಕಲೆ, ಉತ್ತರ ಭಾರತ ಶೈಲಿಯನ್ನು ಬಿಂಬಿಸಿದರೆ, ತೆಂಕಪೇಟೆಯ ಸ್ವಾಗತಕಮಾನುಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ.</p>.<p>ಕಸವನ್ನು ರಸವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ತೆಂಗಿನ ಚಿಪ್ಪಿನಲ್ಲಿ ಮಾಡಿರುವ ಈ ಕಮಾನು ನಿದರ್ಶನವಾಗಿದ್ದು, ಪ್ರವಾಸಿಗರನ್ನು ಹಾಗೂ ಸ್ಥಳೀಯರ ಕುತೂಹಲದ ಕೇಂದ್ರವಾಗಿದೆ. ಮಠಕ್ಕೆ ಹೋಗುವವರು ರಸ್ತೆಯಲ್ಲಿ ಸಾಗುವರರು ಕೊರಗರ ಕಲೆಯನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.</p>.<p><strong>ಕೊರಗ ಯುವಕರ ಕುಸರಿ ಕಾರ್ಯ</strong></p>.<p>ಕೊರಗ ಯುವ ಸಂಘಟನೆಯ ಸುದರ್ಶನ್ ಕೋಟ ಹಾಗೂ ಶರತ್ ಕುಂಭಾಶಿ ನೇತೃತ್ವದ ತಂಡ ಈ ಕಾಮಾನಿನ ವಿನ್ಯಾಸ ಮಾಡಿದೆ. ಕುಸರಿ ಕಾರ್ಯವನ್ನು ಕುಂಭಾಶಿಯಲ್ಲಿ ಮಾಡಲಾಗಿದ್ದು, ಉಡುಪಿಗೆ ತಂದು ಜೋಡಣೆ ಮಾಡಲಾಗಿದೆ.</p>.<p>ಈ ಸುಂದರ ಕಮಾನು ನಿರ್ಮಾಣಕ್ಕೆ 9 ದಿನಗಳು ಹಿಡಿದಿದ್ದು, 5 ದಿನ ಹಗಲಿನ ಹೊತ್ತು ಹಾಗೂ 4 ದಿನ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಯುವಕರ ಶ್ರಮದ ಫಲವಾಗಿ ಕಲಾತ್ಮಕವಾದಕಮಾನುನಿರ್ಮಾಣವಾಗಿದ್ದು, ಜನರ ಗಮನ ಸೆಳೆಯುತ್ತಿದೆ.</p>.<p>ಕೊರಗ ಯುವ ಸಂಘಟನೆ ಈಗಾಗಲೇ ಬೀಚ್ ಉತ್ಸವ, ಧಾರ್ಮಿಕ ಉತ್ಸವ, ಜಾತ್ರೆಗಳಲ್ಲಿ ಕಲಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯ ವಿನ್ಯಾಸಗಳನ್ನು ತಯಾರಿಸಿದ್ದಾರೆ. ವೇದಿಕೆ ಅಲಂಕಾರ, ಸ್ವಾಗತ ಕಮಾನು ಹಾಗೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.</p>.<p>ವಿವಿಧ ವಿನ್ಯಾಸದ ಹಾಗೂ ಗಾತ್ರದ ಬುಟ್ಟಿಗಳನ್ನು ಹೆಣೆದು ಜಾತ್ರೆ ಹಾಗೂ ಉತ್ಸವಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು, ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಸಾಂಪ್ರದಾಯಿಕ ಶೈಲಿಯ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ತಂಡ ಶ್ರಮಿಸುತ್ತಿದೆ.</p>.<p>ಕಲಾವಿದರಾದ ಪುರೋಷತ್ತಮ ಅಡ್ವೆ ಅವರ ಮಾರ್ಗದರ್ಶನದಲ್ಲಿ ಯುವಕರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಕೊರಗ ಯುವ ಸಂಘಟನೆಯ ಗಣೇಶ್ ವಿ.ಕೊರಗ ಕುಂಭಾಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಸ್ವಾಗತಕಮಾನುಗಳು ಪರ್ಯಾಯದ ವೈಭವಕ್ಕೆ ಮೆರಗು ನೀಡುತ್ತಿವೆ. ರಥಬೀದಿಗೆ ಸಂಪರ್ಕಿಸುವ ತೆಂಕಪೇಟೆ ಮಾರ್ಗದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡಿರುವ ಬೃಹತ್ ಸ್ವಾಗತಕಮಾನುಜನರನ್ನು ಆಕರ್ಷಿಸುತ್ತಿದೆ.</p>.<p><strong>ಏನಿದರ ವಿಶೇಷ</strong></p>.<p>ನಗರದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅವಳಡಿಸಲಾಗಿರುವ ಸ್ವಾಗತ ಗೋಪುರಗಳು, ಕಮಾನುಗಳು ಕರಾವಳಿಯ ಸಂಸ್ಕೃತಿ, ಪರಂಪರೆ, ಕಲೆ, ಉತ್ತರ ಭಾರತ ಶೈಲಿಯನ್ನು ಬಿಂಬಿಸಿದರೆ, ತೆಂಕಪೇಟೆಯ ಸ್ವಾಗತಕಮಾನುಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ.</p>.<p>ಕಸವನ್ನು ರಸವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ತೆಂಗಿನ ಚಿಪ್ಪಿನಲ್ಲಿ ಮಾಡಿರುವ ಈ ಕಮಾನು ನಿದರ್ಶನವಾಗಿದ್ದು, ಪ್ರವಾಸಿಗರನ್ನು ಹಾಗೂ ಸ್ಥಳೀಯರ ಕುತೂಹಲದ ಕೇಂದ್ರವಾಗಿದೆ. ಮಠಕ್ಕೆ ಹೋಗುವವರು ರಸ್ತೆಯಲ್ಲಿ ಸಾಗುವರರು ಕೊರಗರ ಕಲೆಯನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.</p>.<p><strong>ಕೊರಗ ಯುವಕರ ಕುಸರಿ ಕಾರ್ಯ</strong></p>.<p>ಕೊರಗ ಯುವ ಸಂಘಟನೆಯ ಸುದರ್ಶನ್ ಕೋಟ ಹಾಗೂ ಶರತ್ ಕುಂಭಾಶಿ ನೇತೃತ್ವದ ತಂಡ ಈ ಕಾಮಾನಿನ ವಿನ್ಯಾಸ ಮಾಡಿದೆ. ಕುಸರಿ ಕಾರ್ಯವನ್ನು ಕುಂಭಾಶಿಯಲ್ಲಿ ಮಾಡಲಾಗಿದ್ದು, ಉಡುಪಿಗೆ ತಂದು ಜೋಡಣೆ ಮಾಡಲಾಗಿದೆ.</p>.<p>ಈ ಸುಂದರ ಕಮಾನು ನಿರ್ಮಾಣಕ್ಕೆ 9 ದಿನಗಳು ಹಿಡಿದಿದ್ದು, 5 ದಿನ ಹಗಲಿನ ಹೊತ್ತು ಹಾಗೂ 4 ದಿನ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಯುವಕರ ಶ್ರಮದ ಫಲವಾಗಿ ಕಲಾತ್ಮಕವಾದಕಮಾನುನಿರ್ಮಾಣವಾಗಿದ್ದು, ಜನರ ಗಮನ ಸೆಳೆಯುತ್ತಿದೆ.</p>.<p>ಕೊರಗ ಯುವ ಸಂಘಟನೆ ಈಗಾಗಲೇ ಬೀಚ್ ಉತ್ಸವ, ಧಾರ್ಮಿಕ ಉತ್ಸವ, ಜಾತ್ರೆಗಳಲ್ಲಿ ಕಲಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯ ವಿನ್ಯಾಸಗಳನ್ನು ತಯಾರಿಸಿದ್ದಾರೆ. ವೇದಿಕೆ ಅಲಂಕಾರ, ಸ್ವಾಗತ ಕಮಾನು ಹಾಗೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.</p>.<p>ವಿವಿಧ ವಿನ್ಯಾಸದ ಹಾಗೂ ಗಾತ್ರದ ಬುಟ್ಟಿಗಳನ್ನು ಹೆಣೆದು ಜಾತ್ರೆ ಹಾಗೂ ಉತ್ಸವಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು, ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಸಾಂಪ್ರದಾಯಿಕ ಶೈಲಿಯ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ತಂಡ ಶ್ರಮಿಸುತ್ತಿದೆ.</p>.<p>ಕಲಾವಿದರಾದ ಪುರೋಷತ್ತಮ ಅಡ್ವೆ ಅವರ ಮಾರ್ಗದರ್ಶನದಲ್ಲಿ ಯುವಕರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಕೊರಗ ಯುವ ಸಂಘಟನೆಯ ಗಣೇಶ್ ವಿ.ಕೊರಗ ಕುಂಭಾಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>