ಸೋಮವಾರ ಮಲ್ಪೆ ಸರ್ಕಲ್ ಬಳಿ ಬಸ್ಗೆ ಅಡ್ಡಲಾಗಿ ನಿಲ್ಲಿಸಿದ್ದ ಕಾರನ್ನು ತೆಗೆಯಲು ಬಸ್ ಚಾಲಕ ಸೂಚಿಸಿದ್ದಕ್ಕೆ ಕೋಪಗೊಂಡ ಕಾರಿನಲ್ಲಿದ್ದ ರಾಘ ಸಂದೇಶ, ಶಿವಪ್ರಕಾಶ್, ಶಿವಕುಮಾರ್ ಎಂಬುವರು ಚಾಲಕನಿಗೆ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ವಾಗ್ವಾದ ನಡೆದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬೆದರಿಕೆ ಹಾಕಿದವರು ಪೊಲೀಸ್ ಅಧಿಕಾರಿಗಳಲ್ಲ ಎಂಬ ವಿಚಾರ ಬಯಲಾಗಿದೆ.