ಹೆಚ್ಚಿನ ಚಿಕಿತ್ಸೆಗೆ ಸೋಮವಾರ ರಾತ್ರಿ ಚಂದ್ರಶೇಖರ್ ಅವರನ್ನು ಭಟ್ಕಳದಿಂದ ಉಡುಪಿಗೆ ಕರೆ ತರಲಾಗಿತ್ತು. ವಿಷ ದೇಹಕ್ಕೆ ವ್ಯಾಪಿಸಿ ಲಿವರ್ ವೈಫಲ್ಯವಾಗಿತ್ತು. ಕಿಡ್ನಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಗುರುವಾರ ಅಸುನೀಗಿದ್ದಾರೆ.