ಬಲವಂತದ ಮತಾಂತರ ಸಲ್ಲದು:‘ಮತಾಂತರ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಮನೆಯೊಳಗೆ, ಸಮಾಜದೊಳಗೆ ವೈಮನಸ್ಸು, ಆತಂಕ ಹುಟ್ಟುಹಾಕುವ ಮತಾಂತರವನ್ನು ಸರ್ಕಾರ ಕಾನೂನು ಮೂಲಕ ನಿಗ್ರಹಿಸಬೇಕು. ಸ್ವಇಚ್ಛೆಯ ಮತಾಂತರಕ್ಕೆ ಯಾರ ಅಡ್ಡಿಯೂ ಇಲ್ಲ; ಆದರೆ, ಬಲವಂತ ಆಮಿಷದ ಮೂಲಕ ಮತಾಂತರಕ್ಕೆ ಮುಂದಾದರೆ ಮನೆ, ಕುಟುಂಬ, ಸಮಾಜವನ್ನು ಒಡೆದಂತಾಗುತ್ತದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.