ಮಂಡಲ, ಕಲಶದಲ್ಲಿ ಆವಾಹನೆ ಮಾಡಿ ನವಗ್ರಹ ಪೂರ್ವಕವಾಗಿ ವಿಶೇಷವಾಗಿ ಮಕರ, ಕುಂಭ, ಮೀನ ರಾಶಿಯವರಿಗೆ ದೋಷ ನಿವಾರಣೆಗೆ ಸಾಮೂಹಿಕ ಪೂಜೆ, ಎಳ್ಳುಗಂಟು ದೀಪ ಹಚ್ಚಲಾಯಿತು. ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಸುಗುಣಾ ಶಿವರಾಮ ಆಚಾರ್ಯ ದಂಪತಿ ಪೂಜಾ ನೇತೃತ್ವ ವಹಿಸಿದ್ದರು. ವಿದ್ವಾನ್ ಚಂದ್ರಕಾಂತ ಪುರೋಹಿತ್ ಅವರನ್ನು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್, ಮಹಿಳಾ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.